More

    ಬೈಸಿಕಲ್ ಸವಾರಿ ಆರೋಗ್ಯಕ್ಕೆ ಸಹಕಾರಿ

    ರಾಮದುರ್ಗ: ಇಂದಿನ ತಂತ್ರಜ್ಞಾನದ ಭರಾಟೆಯಲ್ಲಿ ದೈಹಿಕ ಆರೋಗ್ಯಕ್ಕೆ ಸಹಾಯಕವಾಗುವ ಬೈಸಿಕಲ್ ಸವಾರಿಯನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳಬೇಕು ಎಂದು ನ್ಯಾಯವಾದಿ ಎಸ್.ಎಸ್. ಮಾತನವರ ಹೇಳಿದ್ದಾರೆ.

    ವಿಶ್ವ ಬೈಸಿಕಲ್ ದಿನಾಚರಣೆ ಅಂಗವಾಗಿ ಪಟ್ಟಣದಲ್ಲಿ ಜೆಸಿಐ ಸಂಸ್ಥೆ ಏರ್ಪಡಿಸಿದ್ದ ಬೈಸಿಕಲ್ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯಕ್ಕೆ ಅತೀ ಉಪಯುಕ್ತವಾದ ವಸ್ತು ಬೈಸಿಕಲ್. ಅದರ ಸದುಪಯೋಗವನ್ನು ಪ್ರತಿ ದಿನ ಪಡೆದುಕೊಳ್ಳಬೇಕು. ಮೊಬೈಲ್ ವ್ಯಾಮೋಹದಲ್ಲಿ ಇಂದಿನ ಮಕ್ಕಳು ಎಲ್ಲ ಕ್ರೀಡೆಗಳನ್ನು ಮೊಬೈಲ್‌ದಲ್ಲಿಯೇ ಆಡುತ್ತಿದ್ದಾರೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ ಎಂದರು.

    ಸಂಸ್ಥೆಯ ಅಧ್ಯಕ್ಷ ಎಚ್.ಕೆ.ದಾಸರ ಪ್ರಾಸ್ತಾವಿಕವಾಗಿ ಮಾತನಾಡಿದರು. ಒಟ್ಟು 15 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅದರಲ್ಲಿ ಪ್ರಥಮ ಸ್ಥಾನವನ್ನು ಮನೀಶ ಹರವಿ, ದ್ವಿತೀಯ ಸ್ಥಾನವನ್ನು ಪ್ರೀತಂ ನಾಯ್ಕ, ತೃತೀಯ ಸ್ಥಾನವನ್ನು ಪ್ರಜ್ವಲ ಹಡಪದ ಪಡೆದರು. ಕಾರ್ಯಕ್ರಮದಲ್ಲಿ ಡಾ.ಮಹಾಂತೇಶ ಹೊಳಿಮಠ, ಆರ್.ಸಿ.ರಾಠೋಡ, ಸುರೇಶ ಹುಚ್ಚನ್ನವರ, ವಲಯ ಕಾರ್ಯದರ್ಶಿ ರವೀಂದ್ರ ಹರವಿ, ಮುತ್ತು ಬನ್ನೂರ, ಸ್ಥಳೀಯ ನಿವಾಸಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts