More

    ಗ್ರಂಥಾಲಯ ಕಟ್ಟಡಕ್ಕೆ ಭೂಮಿ ಪೂಜೆ

    ಆನವಟ್ಟಿ: ಇಲ್ಲಿನ ಪ್ರಥಮದರ್ಜೆ ಕಾಲೇಜಿನ ಗ್ರಂಥಾಲಯ ಹಾಗೂ ಹೆಚ್ಚುವರಿ ಕೊಠಡಿಗಳಿಗೆ ಎಸ್‌ಡಿಪಿ ಯೋಜನೆಯಡಿ 2.25 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
    ಶನಿವಾರ ಹುರುಳಿ ಗ್ರಾಮದಲ್ಲಿ 25 ಲಕ್ಷ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ, 20 ಲಕ್ಷ ರೂ. ವೆಚ್ಚದ ಎಸ್‌ಸಿ ಕಾಲನಿಯ ಸಮುದಾಯ ಭವನ, ವಿಠಲಾಪುರ ಗ್ರಾಮದ 50 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಕಾಂಪೌಂಡ್, ವಾಹನ ನಿಲುಗಡೆ ಶೆಡ್ ಮುಂತಾದ ಯೋಜನೆಗಳಿಗೆ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಪ್ರಾಚಾರ್ಯ ಎಂ.ಬಿ.ಗಣಪತಿ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಧುಕೇಶ್ವರ ಪಾಟೀಲ್, ಸದಸ್ಯರಾದ ಚಾಂದ್ ನೂರಿ, ಎಚ್.ಎಚ್ ಬಸವರಾಜಪ್ಪ, ಚನ್ನಾನಾಯ್ಕ, ರಾಜು, ಬಿ.ಸುಮಾ, ಶಾಂತಾರಾಮ್, ಮುಖಂಡರಾದ ಸದಾನಂದ ಗೌಡ ಬಿ. ಪಾಟೀಲ್, ಕೆ.ಪಿ.ರುದ್ರಗೌಡ, ಆರ್.ಸಿ ಪಾಟೀಲ್, ಸುರೇಶ್ ಹಾವಣ್ಣನವರ್, ಎಲ್.ಜಿ ಮಾಲತೇಶ್, ಅರುಣ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts