ಭರಮಸಾಗರ: ಲಾಕ್ಡೌನ್ ಸ್ವಲ್ಪ ಸಡಿಲಿಕೆಯಾಗಿದ್ರೂ ನಿಯಮ ಮೀರಿ ವರ್ತಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪಿಎಸ್ಐ ರಾಜು ಎಚ್ಚರಿಸಿದರು.
ಪೊಲೀಸ್ ಠಾಣೆ ಆವರಣದಲ್ಲಿ ಗುರುವಾರ, ಅಂಗಡಿ ಮಾಲೀಕರು ಹಾಗೂ ವರ್ತಕರಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಅಂತಾರಾಜ್ಯ, ಜಿಲ್ಲೆ ಸಂಚಾರಕ್ಕೆ ಮೇಲಧಿಕಾರಿಗಳ ಅನುಮತಿ ಮುಖ್ಯ. ವರ್ತಕರು ವ್ಯಾಪಾರ ನಡೆಸುವ ವೇಳೆ ಮಾಸ್ಕ್ ಧರಿಸುವುದು ಅವಶ್ಯ ಎಂದರು. ಆರೋಗ್ಯ, ಕಂದಾಯ, ಗ್ರಾಪಂ ಅಧಿಕಾರಿಗಳು ಇದ್ದರು.