More

    ಸಾಮಾಜಿಕ ಪರಿವರ್ತನೆಗೆ ಚಳವಳಿ

    ಭರಮಸಾಗರ: ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ಸಾಮಾಜಿಕ ಪರಿವರ್ತನೆ ಚಳವಳಿ ನಡೆಸಿದರು ಎಂದು ದಾವಣಗೆರೆ ವಿರಕ್ತ ಪಠದ ಬಸವಪ್ರಭು ಸ್ವಾಮೀಜಿ ಹೇಳಿದರು.

    ಬೆಂಗಳೂರಿನಲ್ಲಿ ಫೆ.16ರಂದು ನಡೆಯುವ ಅಸಂಖ್ಯ ಪ್ರಮಥ ಗಣಮೇಳದ ಹಿನ್ನೆಲೆಯಲ್ಲಿ ಇಲ್ಲಿನ ಬಸವೇಶ್ವರ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದರು.

    ಶರಣರು ಮಾನವೀಯ ಮೌಲ್ಯಗಳನ್ನು ಪ್ರಚುರಪಡಿಸಿದ್ದು, ಅವುಗಳನ್ನು ಮುಂದುವರಿಸುವ ಕಾರ್ಯವಾಗಬೇಕು. ವಿವಿಧ ಧಾರ್ಮಿಕ ಕೇಂದ್ರಗಳು, ಸರ್ವ ಸಮುದಾಯದ ಮಠಾಧೀಶರ ಸಹಯೋಗದೊಂದಿಗೆ ಮುರುಘಾ ಶರಣರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಫೆ.16ರಂದು ಅಸಂಖ್ಯ ಪ್ರಮಥ ಗಣಮೇಳ ಏರ್ಪಡಿಸಲಾಗಿದೆ ಎಂದು ಹೇಳಿದರು.

    ಜಿಪಂ ಸದಸ್ಯ ಡಿ.ವಿ.ಶರಣಪ್ಪ ಅಧ್ಯಕ್ಷತೆ ವಹಿಸಿದ್ದರು. ಎಸ್‌ಎಂಎಲ್ ಎಚ್.ಎನ್.ತಿಪ್ಪೇಸ್ವಾಮಿ, ಸಿ.ಟಿ.ಮಹಂತೇಶ್, ಬಿ.ಬಸವರಾಜಪ್ಪ, ಕೆ.ಜೆ.ಮುರುಗೇಶ್, ಗ್ರಾಪಂ ಅಧ್ಯಕ್ಷ ಶ್ರೀನಿವಾಸ್, ಎಸ್‌ಜೆಎಂ ವಿದ್ಯಾಪೀಠದ ಕಾರ್ಯನಿರ್ವಹಣಾಧಿಕಾರಿ ದೊರೆಸ್ವಾಮಿ, ಕಾರ್ಯದರ್ಶಿ.ಎ.ಜೆ.ಪರಮಶಿವಯ್ಯ, ಚನ್ನೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts