ನವದೆಹಲಿ: ಸ್ಮಾರ್ಟ್ಫೋನ್ ಬಳಕೆದಾರರ ಮೇಲೆ ಹ್ಯಾಕರ್ಗಳ ಕಣ್ಣು ಸದಾ ಇದ್ದೇ ಇರುತ್ತದೆ. ಯಾವಾಗ, ಯಾವ ಸಂದರ್ಭದಲ್ಲಿ ಹ್ಯಾಕ್ ಮಾಡಲು ಛಾನ್ಸ್ ಸಿಗುತ್ತದೆ ಎನ್ನುವುದನ್ನು ಕಾಯುತ್ತಿರುತ್ತಾರೆ.
ಇದೀಗ ಕರೊನಾ ವೈರಸ್ ಮೇಲೆ ಹ್ಯಾಕರ್ಸ್ ಕಣ್ಣು ಬಿದ್ದಿದೆ. ಕರೊನಾ ಜಾಗೃತಿ ಸಂಬಂಧಿತ ಆ್ಯಪ್ಗಳು, ಸಂದೇಶಗಳನ್ನೇ ಬಂಡವಾಳವಾಗಿಸಿಕೊಂಡಿರುವ ಇವರು, ಇದರ ಮೂಲಕ ವೈರಸ್ ಹರಿಬಿಟ್ಟು ವೈಯಕ್ತಿಯ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ. ಈ ಬಗ್ಗೆ ಕೇಂದ್ರ ತನಿಖಾ ದಳ (ಸಿಬಿಐ) ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಮುಸ್ಲಿಮರ ದುಡ್ಡು ಮುಸ್ಲಿಮರಿಗಷ್ಟೇ, ಕರೊನಾ ನಿಧಿಗೆ ಅಲ್ಲ ಎಂದ ಶಾಸಕ ಜಮೀರ್ ಅಹ್ಮದ್- ಹಣ ಕೊಡುವವರಿಗೂ ಅಡ್ಡಗಾಲು!
ಕರೊನಾ ವೈರಸ್ಗೆ ಸಂಬಂಧಿಸಿದಂತೆ ಲಿಂಕ್ಗಳ ಮೇಲೆ ಕ್ಲಿಕ್ಕಿಸುವಾಗ ಎಚ್ಚರದಿಂದ ಇರುವಂತೆ ಎಲ್ಲರಿಗೂ ಸಂದೇಶ ರವಾನೆ ಮಾಡಲು ಎಲ್ಲ ರಾಜ್ಯಗಳಿಗೆ ಸಿಬಿಐ ತಿಳಿಸಿದೆ. ಬ್ಯಾಂಕಿಂಗ್ ಟ್ರೋಜನ್ಗೆ ಸಂಬಂಧಿಸಿದ ಈ ವೈರಸ್ ಅನ್ನು ಹ್ಯಾಕರ್ಗಳು ಸೃಷ್ಟಿಸಿದ್ದಾರೆ. ಇದರರ್ಥ, ಒಂದು ವೇಳೆ ವೈರಸ್ ಇರುವ ಲಿಂಕ್ಗಳನ್ನು ಬಳಕೆದಾರರೇನಾದರೂ ಕ್ಲಿಕ್ಕಿಸಿದ್ದೇ ಆದರಲ್ಲಿ, ಅವರ ಬ್ಯಾಂಕ್ನ ಸಂಪೂರ್ಣ ವಿವರ ಹ್ಯಾಕರ್ಗಳ ಕೈಸೇರಲಿದೆ. ಸರ್ಬೇರಸ್ ಹೆಸರಿನ ಒಂದು ಸಾಫ್ಟ್ವೇರ್ ಬಳಸಿ ಈ ಹ್ಯಾಕಿಂಗ್ ಮಾಡಲಾಗುತ್ತಿದೆ.
ಬ್ಯಾಂಕಿಂಗ್ ಟ್ರೋಜನ್ ಬಳಸಿ ಬಳಕೆದಾರರಿಗೆ ಕೊರೊನಾ ಬಗ್ಗೆ ಮಾಹಿತಿ ಡೌನ್ ಲೋಡ್ ಮಾಡಿಕೊಳ್ಳಲು ಎಸ್ಎಂಎಸ್ ಲಿಂಕ್ ಕೂಡ ಕಳುಹಿಸುತ್ತದೆ. ಬಳಕೆದಾರರು ಈ ಲಿಂಕ್ ಮೇಲೆ ಕ್ಲಿಕ್ಕಿಸಿದಾಗ ಅವರ ಮೊಬೈಲ್ನಲ್ಲಿ ಸಾಫ್ಟ್ವೇರ್ ಸ್ಥಾಪನೆಯಾಗಿ, ಬಳಕೆದಾರರ ಮಾಹಿತಿ ಕಳುವು ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ಮಠದಲ್ಲಿ ಕಳ್ಳತನಕ್ಕೆ ಯತ್ನ- ತಡೆಯಲು ಯತ್ನಿಸಿದ ಗಂಗಾಧರ ಸ್ವಾಮೀಜಿ ಮೇಲೆ ತೀವ್ರ ಹಲ್ಲೆ: ಆಸ್ಪತ್ರೆಗೆ ದಾಖಲು
ಲಾಕ್ಡೌನ್ ಅವಧಿ ವಿಸ್ತರಣೆಯಾಗಿರುವ ಈ ಸಂದರ್ಭದಲ್ಲಿ ಆನ್ಲೈನ್ನಲ್ಲಿಯೇ ಜನರು ಹೆಚ್ಚಿಗೆ ಕಾಲ ಕಳೆದಯುವ ಕಾರಣ, ಇದು ಸೈಬರ್ ಕಳ್ಳರಿಗೆ ಒಳ್ಳೆಯ ಸಮಯವಾಗಿದೆ. ಆದ್ದರಿಂದ ಜನರು ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ.
ಆದ್ದರಿಂದ ನಕಲಿ ವೆಬ್ಸೈಟ್ ಅಥವಾ ಎಸ್ಎಂಎಸ್ ಮೂಲಕ ಬರುವ ಅಪ್ಲಿಕೇಷನ್ಗಳನ್ನು ಕ್ಲಿಕ್ ಮಾಡಲು ಹೋಗಬೇಡಿ. ಸ್ಮಾರ್ಟ್ಫೋನ್ಗಳಿಗೆ ಆ್ಯಂಟಿವೈರಸ್ ಇರಲಿ, ಅಸುರಕ್ಷಿತ ವೈ-ಫೈ ನೆಟ್ವರ್ಕ್ಗಳನ್ನು ಬಳಸದಿರಿ ಎನ್ನುತ್ತಾರೆ ತಜ್ಱರು.