More

    3 ತಿಂಗಳು ಮನೆಯಲ್ಲಿ ಕೂತಿದ್ರೂ ಸಂಬಳ ಕೊಟ್ಟಿದ್ದಾರೆ, ಆ ನಿಯತ್ತು ಇದ್ದರೆ ನಾವು ಸೇವೆ ಮಾಡಬೇಕು: ಬಸ್ ಚಾಲಕ

    ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರು ರಾಜ್ಯಾದ್ಯಂತ ಮುಷ್ಕರ ನಡೆಸುತ್ತಿರುವ ನಡುವೆಯೇ ಮಹಾಮಾರಿ ಕರೊನಾ ವೈರಸ್​ ಸಂಕಷ್ಟದಲ್ಲಿ ಮುಷ್ಕರ ಸರಿಯಲ್ಲ ಎಂದು ಸಾರಿಗೆ ನೌಕರರೊಬ್ಬರು ವಿರೋಧ ವ್ಯಕ್ತಪಡಿಸಿದ್ದಾರೆ.

    ಕರೊನಾ ಲಾಕ್​ಡೌನ್​ ಸಂದರ್ಭದಲ್ಲಿ ಮೂರು ತಿಂಗಳು ಮನೆಯಲ್ಲಿ ಕುಳಿತಿದ್ದರೂ ನಮಗೆ ಸಂಬಳ ನೀಡಿದ್ದಾರೆ. ನಿಯತ್ತು ಅಥವಾ ಮನಃಸಾಕ್ಷಿ ಇದ್ದವರು ಸೇವೆ ಮಾಡಬೇಕು ಎಂದಿರುವ ಬಿಎಂಟಿಸಿ ಬಸ್​ ಚಾಲಕ, ಸೇವೆಗೆ ಹಾಜರಾಗುವ ಮೂಲಕ ಕರ್ತವ್ಯ ನಿಷ್ಠೆ ಮರೆದಿದ್ದಾರೆ.

    ಇದನ್ನೂ ಓದಿರಿ: ಸಾರಿಗೆ ನೌಕರರ ಪ್ರತಿಭಟನೆ ನಡುವೆಯೇ ಹೃದಯಾಘಾತದಿಂದ ಪ್ರಯಾಣಿಕ ಸಾವು

    ಕರೊನಾ ಸಂಕಷ್ಟ ಸಮಯದಲ್ಲಿ ದುಡ್ಡೇ ಇಲ್ಲ ಅಂದಾಗ ಎಲ್ಲಿಂದ ಕೊಡುತ್ತಾರೆ. ಮೂರು ತಿಂಗಳು ನೀವು ಮನೆಯಲ್ಲಿದ್ದಾಗ ಈ ಸಂಸ್ಥೆ ನಿಮ್ಮ ಸಂಸಾರವನ್ನು ಸಾಕಿದೆ. ಈ ಋಣಕ್ಕಾದರೂ ಬಂದು ಸೇವೆ ಸಲ್ಲಿಸಿ ಎಂದರು.

    ಮುಷ್ಕರದ ದಿನ ಬಸ್​ ಓಡಿಸಿದವರಿಗೆ ಚಪ್ಪಲಿ ಹಾರ ಹಾಕುವ ವಿಚಾರವಾಗಿ ಮಾತನಾಡಿ, ನನ್ನ ಹೆಸರು ತ್ಯಾಗರಾಜು, ನಾನೇ ಆಹ್ವಾನ ಮಾಡುತ್ತಿದ್ದೇನೆ. ಖಂಡಿತವಾಗಿ ಹಾರ ಹಾಕಬಹುದು. ನಾನು ಸಾರ್ವಜನಿಕ ಸೇವೆಗೆಂದು ಬಂದಿದ್ದೇನೆ. ಅದಕ್ಕಾಗಿ ಚಪ್ಪಲಿ ಹಾರ ಹಾಕಿಸಿಕೊಳ್ಳುವುದಕ್ಕೂ ನಾನು ರೆಡಿ ಎಂದು ತ್ಯಾಗರಾಜು ಅವರು ಸವಾಲು ಹಾಕಿದರು.

    PHOTOS| ಸಾರಿಗೆ ನೌಕರರ ಮುಷ್ಕರ: ಬಿಕೋ ಎನ್ನುತ್ತಿರುವ ಮೆಜೆಸ್ಟಿಕ್​ ಬಸ್​ ನಿಲ್ದಾಣ

    ಬೆಳ್ಳಂಬೆಳಗ್ಗೆ ತಟ್ಟಿದ ಸಾರಿಗೆ ನೌಕರರ ಮುಷ್ಕರ ಬಿಸಿ: ಸರ್ಕಾರಿ ನಿಲ್ದಾಣದಲ್ಲಿ ಖಾಸಗಿ ದರ್ಬಾರ್​, ದುಪ್ಪಟ್ಟು ದರ

    ಶಾಸಕರ ಪುತ್ರನ ಮೇಲೆಯೇ ಹಲ್ಲೆ; ಕಾರನ್ನು ಹಿಂಬಾಲಿಸಿಕೊಂಡು ಬಂದು ಕಪಾಳಕ್ಕೆ ಹೊಡೆದರು!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts