ಬೆಂಗಳೂರು: ಸಿಲಿಕಾನ್ ಸಿಟಿಯ ಪಬ್ಗಳಲ್ಲಿ ಮಹಿಳೆಯರಿಗಿಲ್ವಾ ಸುರಕ್ಷತೆ? ಕುಟುಂಬಸ್ಥರ ಜತೆ ಪಬ್ಗಳಿಗೆ ಹೋದರು ತೊಂದರೆ ತಪ್ಪಿದ್ದಲ್ಲ ಎನ್ನುವುದಕ್ಕೆ ಸಾಕ್ಷಿಯಂತಿದೆ ಕೆಲವು ದಿನಗಳ ಹಿಂದೆ ಅಮಾನವೀಯ ಘಟನೆ. ಪಬ್ಗಳಲ್ಲಿ ಮಹಿಳೆಯರಿಗೆ ಭದ್ರತೆ ಕೊಡುವಂತೆ ಪೊಲೀಸರು ಆದೇಶ ನೀಡಿದ್ದರೂ, ಆ ಆದೇಶ ಬರೀ ಖಾಲಿ ಹಾಳೆಗೆ ಸಿಮಿತವಾಯ್ತ? ಎಂಬ ಪ್ರಶ್ನೆ ಕಾಡುವಂತಿದೆ.
ತಾಯಿ ಜತೆ ಪಬ್ಗೆ ಬಂದ ಯುವತಿಗೂ ರಕ್ಷಣೆ ಕೊಡದ ಪಬ್ ಇನ್ನೇಷ್ಟು ಸೇಫ್? ಪ್ರತಿ ಪಬ್ ಅಂಡ್ ರೆಸ್ಟೋರೆಂಟ್ಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಿ, ಮಹಿಳೆಯರಿಗೆ ಭದ್ರತೆ ಕೊಡುವಂತೆ ಪೊಲೀಸ್ ಇಲಾಖೆ ಸೂಚನೆ ನೀಡಿದೆ. ಆದರೆ ಇದ್ಯಾವುದನ್ನು ಪಾಲಿಸದ ಪಬ್ ಮಾಲೀಕರು ನಿಯಮಗಳನ್ನ ಗಾಳಿಗೆ ತೂರಿದ್ದಾರೆ.
ಹೀಗಾಗಿ ಪಬ್-ಗಿಬ್ಬು ಎಂದು ತಿರುಗಾಡೋ ಯುವತಿಯರು ತುಂಬಾ ಎಚ್ಚರಬಹಿಸಬೇಕಾದ ಅನಿವಾರ್ಯತೆ ಇದೆ. ಸ್ವಲ್ಪ ಮೈಮರೆತರೆ ಅಂಥವರಿಗಾಗಿಯೇ ಪಬ್ಗಳಲ್ಲಿ ಕಾದು ಕುಳಿತಿರುತ್ತಾನೆ ಕಾಮುಕ. ಹೀಗಾಗಿ ವಾರಾಂತ್ಯದಲ್ಲಿ ಪಬ್ಗಳಿಗೆ ಹೋಗುವ ಯುವತಿಯರು ಎಚ್ಚರವಹಿಸುವುದು ಸೂಕ್ತ. ಇಲ್ಲವಾದರೆ ಏನಾಗಬಹುದು ಎಂಬುದಕ್ಕೆ ಈ ಒಂದು ಘಟನೆ ಸಾಕ್ಷಿಯಾಗಿದೆ.
ಹೌದು. ಚರ್ಚ್ ಸ್ಟ್ರೀಟ್ ರೋಡ್ನಲ್ಲಿರುವ ಶರತ್ ರೈ ಎಂಬುವರಿಗೆ ಸೇರಿದ ಮೀರಾಜ್ ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ಕಾಮುಕನೊಬ್ಬ ಯುವತಿ ಮೇಲೆ ವಿಕೃತಿ ಮೆರೆದಿದ್ದಾನೆ. ಈ ಘಟನೆ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದಾಳೆ. ಯುವತಿಯ ಜತೆ ಪೋಷಕರಿದ್ದರು ಕೇರ್ ಮಾಡದ ಕಾಮುಕ ಸ್ನೇಹಿತರಂತೆ ಪರಿಚಯವಾಗಿ ಯುವತಿ ಬಳಿ ಬಂದು ವಿಕೃತಿ ಮೆರೆದಿದ್ದಾನೆ.
ಇದೇ ತಿಂಗಳ 21ರ ರಾತ್ರಿ 9:30ಕ್ಕೆ ತಾಯಿ ಹಾಗೂ ಸ್ನೇಹಿತರ ಜತೆ ಯುವತಿ ಪಬ್ಗೆ ಎಂಟ್ರಿ ಕೊಟ್ಟಿದ್ದಳು. ಈ ವೇಳೆ ಸ್ನೇಹಿತೆಯ ಕಡೆಯಿಂದ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ ಕಾಮುಕ ಮಧುಸೂದನ್ ಚೆಲ್ಲಾರಾಮ್, ಪಬ್ನಲ್ಲಿ ಪಾರ್ಟಿ ಮಾಡ್ತಿದ್ದ ವೇಳೆ ಯುವತಿ ಬಳಿ ಬಂದಿದ್ದಾನೆ. ಬಳಿಕ ಆಕೆಯನ್ನು ತಬ್ಬಿಕೊಂಡು ಅಸಭ್ಯವಾಗಿ ವರ್ತಿಸಲು ಶುರು ಮಾಡಿದ್ದಾನೆ.
ಈ ವೇಳೆ ಯುವತಿಯ ಭುಜ ಕಚ್ಚಿ ವಿಕೃತಿ ಮೆರೆದಿದ್ದಾನೆ. ಅಲ್ಲದೆ, ಯುವತಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾನೆ. ಸದ್ಯ ಘಟನೆ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದಾಳೆ. ದೂರು ದಾಖಲಿಸಿಕೊಂಡ ಪೊಲೀಸರು ಮಧುಸೂದನ್ನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)
ಒಂದಲ್ಲ, ಎರಡಲ್ಲ 40 ಹಾವುಗಳು…ಸಾಲದಕ್ಕೆ 2 ಚೇಳುಗಳು! ಇದು ಅಂಗನವಾಡಿಯಲ್ಲ ಹಾವಿನ ಮನೆ
ರಸ್ತೆಯಲ್ಲೇ ಯುವತಿ ಆತ್ಮಹತ್ಯೆ ಯತ್ನ: ಲವರ್ ಜತೆ ಸ್ಕೂಟರ್ನಲ್ಲಿ ಬಂದಿಳಿದ ಬೆನ್ನಲ್ಲೇ ಹೈಡ್ರಾಮ ಶುರು!
ಟೀಮ್ ಇಂಡಿಯಾ ಪರ ಪದಾರ್ಪಣೆ ಪಂದ್ಯದಲ್ಲೇ ದಾಖಲೆ ಬರೆದ ಕನ್ನಡಿಗ ಪ್ರಸಿದ್ಧಕೃಷ್ಣ