ಬೆಂಗಳೂರು: ಗುತ್ತಿಗೆದಾರರು ಮತ್ತು ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಉದ್ಯಾನವನ ಕಸದ ತೊಟ್ಟಿಯಾಗಿ ಮಾರ್ಪಾಡಾಗಿದೆ. ಅಭಿವೃದ್ದಿಯ ಹೆಸರಿನಲ್ಲಿ ಕಳಪೆ ಕಾಮಗಾರಿ ಮಾಡಿರುವ ಪರಿಣಾಮ ಉದ್ಯಾನವನಕ್ಕೆ ಈ ದುಸ್ಥಿತಿ ಒದಗಿಬಂದಿದೆ.
ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಂಗೇರಿ ಉಪನಗರದ 3 ಮತ್ತು 4 ನೇ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಉದ್ಯಾನವನ ಇದೀಗ ಗಬ್ಬು ನಾರುತ್ತಿದೆ. ಹಳೆಯ ಕಲ್ಲು ಬಳಸಿ, ಬಣ್ಣ ಬಳಿದು ನಡಿಗೆ ಪಥ ನಿರ್ಮಾಣ ಮಾಡಲಾಗಿದೆ. ಉದ್ಯಾನವನದ ಸುತ್ತ ಕಾಮಗಾರಿಯೂ ವಿಳಂಬವಾಗಿದ್ದು, ಸ್ವಚ್ಛತೆಯಿಲ್ಲದೆ ಸೊಳ್ಳೆಗಳ ಆವಾಸ ಸ್ಥಾನವಾಗಿದೆ.
ಉದ್ಯಾನವನದಲ್ಲಿ ಕಸದ ರಾಶಿ ಇದ್ದು, ಮಳೆ ಬಂದಾಗ ಕಸ ಕೊಳೆತು ದುರ್ವಾಸನೆ ಬೀರುತ್ತಿದೆ. ಇದರಿಂದ ವಾಯುವಿಹಾರಕ್ಕೆ ಬರುವ ನಾಗರಿಕರಿಗೂ ತೊಂದರೆ ಆಗುತ್ತಿದೆ. ಉದ್ಯಾನವನದ ಅಕ್ಕಪಕ್ಕದ ರಸ್ತೆಯಲ್ಲಿ ಓಡಾಡುವುದೇ ದುಸ್ಸಾಹಸವಾಗಿದೆ.
ಅರಣ್ಯಾಧಿಕಾರಿ ಸಾವಿನ ಕೇಸ್: ಪತ್ನಿಯ ಅಕ್ರಮ ಬಯಲಿಗೆಳೆಯಲು ಮಾಡಿದ್ದ ಸುಳ್ಳು ಪತ್ತೆ ಪರೀಕ್ಷೆಯ ವರದಿ ಔಟ್
ಅಡವಿಟ್ಟ ಮಾಂಗಲ್ಯ ಸರ ಬಿಡಿಸಿಕೊಳ್ಳಲು ಬಂದಾಗ ನಕಲಿ ಚಿನ್ನವೆಂದ ಬ್ಯಾಂಕ್ ಮ್ಯಾನೇಜರ್! ಮಹಿಳೆಯ ಕಣ್ಣೀರು
ಇಂದು ಸಿಎಸ್ಕೆ-ಸನ್ರೈಸರ್ಸ್ ; ಪ್ಲೇಆಫ್ ಖಾತ್ರಿಗಾಗಿ ಧೋನಿ ಬಳಗ ಹೋರಾಟ