ಬೆಂಗಳೂರು: ಆತಂಕಕಾರಿ ಘಟನೆಯೊಂದರಲ್ಲಿ 17ನೇ ಮಹಡಿಯಿಂದ ಬಿದ್ದು ಸಾಯಲು ಹೊರಟ್ಟಿದ್ದ ಯುವತಿಯನ್ನು ಅಗ್ನಿಶಾಮಕ ಸಿಬ್ಬಂದಿ ಬಹಳ ನಾಜೂಕಾಗಿ ರಕ್ಷಿಸಿದ್ದಾರೆ. ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಶುಕ್ರವಾರ ಬೆಳಗ್ಗೆ 1 ಗಂಟೆಯ ಸುಮಾರಿಗೆ ಘಟನೆ ನಡೆದಿದೆ.
ಶುಭಾ ರಕ್ಷಣೆಗೊಳಗಾದ ಯುವತಿ. ದೆಹಲಿ ಮೂಲದ ಶುಭಾ ಮಾನಸಿಕವಾಗಿ ನೊಂದಿದ್ದಳು ಎನ್ನಲಾಗಿದೆ. ಕೆಲ ವರ್ಷಗಳ ಹಿಂದೆ ತನ್ನ ತಾಯಿಯನ್ನು ಕಳೆದುಕೊಂಡಿದ್ದ ಶುಭಾ, ತಾಯಿಯ ವರ್ಷದ ಕಾರ್ಯಕ್ಕಾಗಿ ಎಲೆಕ್ಟ್ರಾನಿಕ್ ಸಿಟಿಯ ಪ್ರೆಸ್ಟೀಜ್ ಸನ್ರೈಸ್ ಅಪಾರ್ಟೆಂಟ್ನ ತನ್ನ ಸಂಬಂಧಿಕರ ಮನೆಗೆ ಬಂದಿದ್ದಳು. ಆದರೆ, ಲಾಕ್ಡೌನ್ ಇದ್ದಿದ್ದರಿಂದ ದೆಹಲಿಗೆ ಮರಳಲು ಸಾಧ್ಯವಾಗಿರಲಿಲ್ಲ.
ತಾಯಿ ಸಾವಿನಿಂದ ಸಾಕಷ್ಟು ನೊಂದಿದ್ದ ಶುಭಾ, ವರ್ಷದ ಕಾರ್ಯದ ವೇಳೆ ತಾಯಿಯ ನೆನಪಾಗಿ ಇನ್ನಷ್ಟು ನೊಂದಿದ್ದಳು. ಹೀಗಾಗಿ ಸಾಯಲು ನಿರ್ಧಾರ ಮಾಡಿದ್ದಳು ಎನ್ನಲಾಗಿದೆ. ಅಪಾರ್ಟ್ಮೆಂಟ್ನ 17ನೇ ಮಹಡಿ ಏರಿದ್ದ ಶುಭಾ, ಭಯಗೊಂಡು ಕಿಟಕಿಯ ಕೆಳ ಭಾಗದಲ್ಲಿ ಹೆದರಿ ಕುಳಿತತಿದ್ದಳು. ಈ ವೇಳೆ ಇದನ್ನು ಗಮನಿಸಿದ ಅಪಾರ್ಟ್ಮೆಂಟ್ನ ಅಸೋಸಿಯೇಷನ್ ವ್ಯಕ್ತಿ, ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದರು.
ತಕ್ಷಣ ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ತಾಳ್ಮೆ ಹಾಗು ಬುದ್ಧಿವಂತಿಕೆಯಿಂದ ಶುಭಾಳನ್ನು ಬಚಾವ್ ಮಾಡಿದರು. ಶುಭ ಕೂಡ ಅಗ್ನಿಶಾಮಕ ಸಿಬ್ಬಂದಿಗಳ ಮಾತಿಗೆ ಸ್ಪಂದಿಸಿದಳು. (ದಿಗ್ವಿಜಯ ನ್ಯೂಸ್)
VIDEO| ಲಾಕ್ಡೌನ್ ನಡುವೆ 17ನೇ ಮಹಡಿಯಿಂದ ಬಿದ್ದು ಸಾಯಲು ಹೊರಟ್ಟಿದ್ದ ಯುವತಿ ಬಚಾವ್ ಆಗಿದ್ದು ಹೇಗೆ?
ಬೆಂಗಳೂರು: ಆತಂಕಕಾರಿ ಘಟನೆಯೊಂದರಲ್ಲಿ 17ನೇ ಮಹಡಿಯಿಂದ ಬಿದ್ದು ಸಾಯಲು ಹೊರಟ್ಟಿದ್ದ ಯುವತಿಯನ್ನು ಅಗ್ನಿಶಾಮಕ ಸಿಬ್ಬಂದಿ ಬಹಳ ನಾಜೂಕಾಗಿ ರಕ್ಷಿಸಿದ್ದಾರೆ. ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಶುಕ್ರವಾರ ಬೆಳಗ್ಗೆ 1 ಗಂಟೆಯ ಸುಮಾರಿಗೆ ಘಟನೆ ನಡೆದಿದೆ.#Bengaluru #ElectronicCity #Girl #SuicideAttempt #Resueಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ಕಿಸಿ… https://bit.ly/2Sofn7F
Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶನಿವಾರ, ಏಪ್ರಿಲ್ 25, 2020
ವೈದ್ಯರ ಮಹಾ ಎಡವಟ್ಟು; ಯುವತಿಯೋರ್ವಳಿಗೆ ಶಸ್ತ್ರಚಿಕಿತ್ಸೆ ಮಾಡಿದರು..ಹೊಟ್ಟೆಯೊಳಗೆ ಈ ವಸ್ತುವನ್ನೇ ಬಿಟ್ಟರು..!