ಬೆಂಗಳೂರು: ಕಾಂಗ್ರೆಸ್ ಮುಖಂಡ ಅಲ್ತಾಫ್ ಖಾನ್ ಮೇಲೆ ದಾಳಿ ಮಾಡಲು ಮಾರಕಾಸ್ತ್ರಗಳೊಂದಿಗೆ ಅಲ್ತಾಫ್ ಮನೆ ಬಳಿ ಬಂದಿದ್ದ ಮೂವರು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೂವರು ಯುವಕರನ್ನು ಹಿಡಿದು ಸ್ಥಳೀಯರು ಜೆ.ಜೆ.ನಗರ ಪೊಲೀಸರ ವಶಕ್ಕೆ ನೀಡಿದ್ದಾರೆ. ನಿನ್ನೆ (ಡಿ.24) ರಾತ್ರಿ ಹತ್ತು ಗಂಟೆ ಸುಮಾರಿಗೆ ಆರೋಪಿಗಳು ಜೆಜೆ ನಗರ ಠಾಣಾ ವ್ಯಾಪ್ತಿಯಲ್ಲಿರುವ ಅಲ್ತಾಫ್ ಖಾನ್ ಮನೆ ಬಳಿ ಮಾರಾಕಾಸ್ತ್ರಗಳನ್ನು ಹಿಡಿದು ಬಂದಿದ್ದರು. ಆಟೋರಿಕ್ಷಾದಲ್ಲಿ ಬಂದು ಹೊಂಚು ಹಾಕಿ ಕುಳಿತ್ತಿದ್ದರು.
ಅಲ್ತಾಫ್ ಮನೆಯಿಂದ ಆಚೆ ಬರದಿದ್ದಾಗ, ಮನೆಯಿಂದ ಹೊರ ಬರದೇ ಅಲ್ತಾಫ್ ಬಚಾವ್ ಆದ ಅಂತಾ ಆರೋಪಿಗಳು ಮಾತನಾಡಿಕೊಳ್ಳುವುದನ್ನು ಸ್ಥಳೀಯರು ಕೇಳಿಸಿಕೊಂಡು, ಆಟೋದಲ್ಲಿ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಬೆನ್ನತ್ತಿ ಹಿಡಿದು ಜೆ.ಜೆ. ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.
ನಾಲ್ವರು ಆರೋಪಿಗಳು ಚಾಕು, ಬ್ಲೇಡ್ಗಳನ್ನು ಹಿಡಿದು ಬಂದಿದ್ದರು. ಜನ ಬೆನ್ನತ್ತಿದ್ದನ್ನು ನೋಡಿ ಬಂದಿದ್ದವರಲ್ಲಿ ಒಬ್ಬ ಆರೋಪಿ ಪರಾರಿಯಾಗಿದ್ದಾನೆ. ಸದ್ಯ ಮೂವರನ್ನು ಜೆ.ಜೆ.ನಗರ ಪೊಲೀಸರಿಗೆ ಸ್ಥಳೀಯರು ಒಪ್ಪಿಸಿದ್ದಾರೆ. ಆರೋಪಿಗಳನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)
ಪತ್ನಿ ಜತೆ ಡಿವೋರ್ಸ್ ಪಡೆದುಕೊಂಡ ದಿನವೇ ನನಗೆ ಹೊಸ ಜನ್ಮ! ಲೈಂಗಿಕ ಸುಖವಿಲ್ಲ ಎಂದಿದ್ದ ಸಂಸದನ ಅಳಲು
ಸುರಂಗ ಕೊರೆದು SBI ಬ್ಯಾಂಕ್ನಲ್ಲಿದ್ದ 1 ಕೋಟಿ ರೂ. ಮೌಲ್ಯದ ಚಿನ್ನಾಭರಣ ಎಗರಿಸಿದ ಖದೀಮರು!