ಕೋಲ್ಕತ್ತ: ದೇಶಾದ್ಯಂತ ಕರೊನಾ ಮಹಾಮಾರಿ ಹೆಚ್ಚುತ್ತಿದೆ. ಕೊವಿಡ್-19 ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಪೊಲೀಸರಿಗಂತೂ ವೈರಸ್ನಿಂದ ಪಾರಾಗುವುದೇ ದೊಡ್ಡ ಸವಾಲಾಗಿದೆ.
ಮಹಾರಾಷ್ಟ್ರ, ಕರ್ನಾಟಕದಲ್ಲಿ ಹಲವು ಪೊಲೀಸ್ ಸಿಬ್ಬಂದಿ ಸೋಂಕಿನಿಂದ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಖಾಕಿ ಪಡೆಯಲ್ಲಿ ಸಹಜವಾಗಿ ಆತಂಕ ಮನೆ ಮಾಡಿದೆ. ಹೀಗಿರುವಾಗ ಪಶ್ಚಿಮ ಬಂಗಾಳದ ಕೆಲವು ಪೊಲೀಸರು ಕರೊನಾ ವಿರುದ್ಧ ಹೋರಾಟಕ್ಕೆ ಒಂದು ಹೊಸದಾರಿಯನ್ನೇ ಕಂಡುಕೊಂಡಿದ್ದಾರೆ.
ವೆಸ್ಟ್ಬೆಂಗಾಲ್ ಪೊಲೀಸ್ ಸಿಬ್ಬಂದಿ ಕೊವಿಡ್-19 ಸೋಂಕನ್ನು ಮಣಿಸಲು ಸಾಸಿವೆ ಎಣ್ಣೆಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಸಾಸಿವೆ ಎಣ್ಣೆಯ ಬಳಕೆ, ಲಿಂಬೆಹಣ್ಣಿನ ರಸ ಮಿಶ್ರಿತ ಬಿಸಿ ನೀರು ಕುಡಿಯುವುದರಿಂದ ಕರೊನಾ ಸೋಂಕಿನಿಂದ ಗುಣಮುಖರಾಗಬಹುದು. ವೈರಸ್ ವಿರುದ್ಧ ಚಿಕಿತ್ಸೆಗೆ ಇವೆಲ್ಲ ತುಂಬ ಪರಿಣಾಮಕಾರಿ ಎಂದು ಪೊಲೀಸರು ಅಧಿಕೃತ ಪ್ರಕಟಣೆಯನ್ನೇ ಹೊರಡಿಸಿಬಿಟ್ಟಿದ್ದಾರೆ.
ಸಿಲಿಗುರಿ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಹಲವು ಸಿಬ್ಬಂದಿ ಇದೇ ಮನೆಮದ್ದುಗಳನ್ನು ಅಳವಡಿಸಿಕೊಂಡು ಕರೊನಾದಿಂದ ಪಾರಾಗಿದ್ದಾರೆ ಎಂದೂ ಕೂಡ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಹಾಡುವಾಗ ಛಿದ್ರಗೊಂಡ ಮೆದುಳಿನ ರಕ್ತನಾಳ: ಸಾವು-ಬದುಕಿನ ನಡುವೆ ಮಹಿಳೆಯ ಹೋರಾಟ
ಕರೊನಾ ಬಾರದಂತೆ ನಿಯಂತ್ರಣ ಮತ್ತು ಸೋಂಕಿನಿಂದ ಮುಕ್ತರಾಗಲು ತಾವು ಹೇಗೆ ಸಾಸಿವೆ ಎಣ್ಣೆ ಮತ್ತು ಇತರ ಮನೆಮದ್ದುಗಳನ್ನು ಬಳಸುತ್ತಿದ್ದೇವೆ ಎಂಬುದನ್ನು ಪೊಲೀಸ್ ಸರ್ಕ್ಯುಲರ್ನಲ್ಲಿ ಅವರು ತಿಳಿಸಿದ್ದು, ಹೀಗಿದೆ…
ಬೇಯಿಸಿ ಚೆನ್ನಾಗಿ ಹಿಸುಕಿದ ಆಲೂಗಡ್ಡೆ, ಮೆದುವಾದ ಅನ್ನ ಹಾಗೂ ಸಾಸಿವೆ ಎಣ್ಣೆಯನ್ನು ಜಾಸ್ತಿ ಬಳಕೆ ಮಾಡಿದ ಸಲಾಡ್ಗಳನ್ನು ಸೇವಿಸಬೇಕು.
- ದಿನಕ್ಕೆ ಮೂರು ಬಾರಿ ಇಯರ್ ಬಡ್ಗಳ ಸಹಾಯದಿಂದ ಮೂಗಿನ ಹೊಳ್ಳೆಗಳ ಒಳಗೆ ಸಾಸಿವೆ ಎಣ್ಣೆಯನ್ನು ಲೇಪಿಸಬೇಕು.
- ದಿನಕ್ಕೆ ನಾಲ್ಕರಿಂದ ಐದು ಬಾರಿ ಸ್ಟೀಮ್ ತೆಗೆದುಕೊಳ್ಳಬೇಕು.
- ದಿನಕ್ಕೆ ನಾಲ್ಕು ಬಾರಿ ಬಿಸಿ ನೀರಿಗೆ ಲಿಂಬೆ ರಸ ಬೆರೆಸಿ ಕುಡಿಯಬೇಕು.
- ಹಾಗೇ ದಿನಕ್ಕೆ ನಾಲ್ಕು ಬಾರಿ ಬಿಸಿ ನೀರಿಗೆ ಉಪ್ಪು ಬೆರೆಸಿ ಗಾರ್ಗ್ಲಿಂಗ್ ಮಾಡಬೇಕು.
- ಪ್ರತಿದಿನ ಅರಿಶಿಣ ಮಿಶ್ರಿತ ಹಾಲನ್ನು ಕುಡಿಯಬೇಕು.
ಶೀತ ಮತ್ತು ಕೆಮ್ಮನ್ನು ಗುಣಪಡಿಸಲು ಹಿಂದಿನ ಕಾಲದಿಂದಲೂ ಸಾಸಿವೆ ಎಣ್ಣೆಯನ್ನು ಪರಿಣಾಮಕಾರಿ ಮನೆ ಮದ್ದಾಗಿ ಉಪಯೋಗಿಸಲಾಗುತ್ತದೆ. ಈಗ ಅದೇ ಪದ್ಧತಿಯನ್ನು ಕರೊನಾ ವಿರುದ್ಧ ಹೋರಾಟದಲ್ಲೂ ಅಳವಡಿಸಿಕೊಂಡಿದ್ದೇವೆ ಎಂದು ಸಿಲಿಗುರಿ ಪೊಲೀಸ್ ಕಮಿಷನರೇಟ್ ತಿಳಿಸಿದೆ. ಇದನ್ನೂ ಓದಿ: ಅಕ್ಟೋಬರ್ವರೆಗೂ ಬದಲಾಗೋಲ್ಲ ಪಾಕಿಸ್ತಾನದ ಬಣ್ಣ…
ಸಿಲಿಗುರಿ ಪೊಲೀಸ್ ಆಯುಕ್ತ ತ್ರಿಪುರಾರಿ ಅರ್ಥವ್ ಅವರು ಕೂಡ ಕರೊನಾ ವಿರುದ್ಧ ಹೋರಾಟಕ್ಕೆ ಇದೇ ದಾರಿಯನ್ನು ಕಂಡುಕೊಂಡಿದ್ದಾರೆ.
ಉತ್ತರ ಬಂಗಾಳ ಡೆಪ್ಯೂಟಿ ಕಮಿಷನರ್ ಅವರ ಸಂಬಂಧಿ, ಶ್ವಾನದಳ ನಿರ್ವಹಣಾ ಸಿಬ್ಬಂದಿ ಹಾಗೂ ಅವರ ಪತ್ನಿಗೆ ಕೊವಿಡ್-19 ಕಾಣಿಸಿಕೊಂಡಿತ್ತು. ಅವರೂ ಕೂಡ ಈ ಮೇಲಿನ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಸೋಂಕಿನಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ. (ಏಜೆನ್ಸೀಸ್) ಇದನ್ನೂ ಓದಿ: ವಿಕ್ಟೋರಿಯಾದಿಂದ ತಪ್ಪಿಸಿಕೊಂಡಿದ್ದ ಕರೊನಾ ಸೋಂಕಿತ ಸಿಕ್ಕಿಬಿದ್ದಿದ್ಹೇಗೆ?