More

    ಬೆಳಗಾವಿ ಎಸಿಸಿಇ ಚಾಂಪಿಯನ್

    ಹುಬ್ಬಳ್ಳಿ: ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಇಂಡಿಯಾ) ಹುಬ್ಬಳ್ಳಿ ಸೆಂಟರ್ ಆಯೋಜಿಸಿದ್ದ ಸರ್ ಎಂ. ವಿಶ್ವೇಶ್ವರಯ್ಯ ಟ್ರೋಫಿ ಕ್ರಿಕೆಟ್ ಟೂರ್ನಾಮೆಂಟ್​ನಲ್ಲಿ ಬೆಳಗಾವಿ ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಎಸಿಸಿಇ) ತಂಡ ಚಾಂಪಿಯನ್ ಆಗಿದೆ.

    ವಿದ್ಯಾನಗರ ಬಿವಿಬಿ ಇಂಜಿನಿಯರಿಂಗ್ ಕಾಲೇಜ್ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಫೈನಲ್ ಪಂದ್ಯದಲ್ಲಿ ಬೆಳಗಾವಿ ತಂಡ, ಹುಬ್ಬಳ್ಳಿಯ ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ತಂಡವನ್ನು 8 ವಿಕೆಟ್​ಗಳ ಅಂತರದಿಂದ ಸೋಲಿಸಿ ಟ್ರೋಫಿ ತನ್ನದಾಗಿಸಿಕೊಂಡಿತು.

    ಮೊದಲು ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ತಂಡ 10 ಓವರ್​ಗಳಲ್ಲಿ 4 ವಿಕೆಟ್​ಗೆ 94 ರನ್ ಗಳಿಸಿತ್ತು. ಬೆಳಗಾವಿ ತಂಡ 8 ಓವರ್​ಗಳಲ್ಲಿ 2 ವಿಕೆಟ್​ಗೆ 96 ರನ್ ಗಳಿಸಿ ಜಯಶಾಲಿಯಾಯಿತು. ಟೂರ್ನಾಮೆಂಟ್​ನಲ್ಲಿ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಹಾವೇರಿ ಹಾಗೂ ಗದಗ ಜಿಲ್ಲೆಗಳಿಂದ ಒಟ್ಟು 9 ತಂಡಗಳು ಪಾಲ್ಗೊಂಡಿದ್ದವು. 93 ವರ್ಷದ ಪ್ರೊ. ಎ.ಎಚ್. ಅಣ್ಣಿಗೇರಿ ಬ್ಯಾಟಿಂಗ್ ಹಾಗೂ 87 ವರ್ಷದ ಎಚ್.ಕೆ. ಶರ್ಮಾ ಬೌಲಿಂಗ್ ಮಾಡುವ ಮೂಲಕ ಉದ್ಘಾಟಿಸಿದ್ದರು.

    ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಡಾ. ಬಸವರಾಜ ಕೊಟ್ಟೂರಶೆಟ್ಟರ್ ಹಾಗೂ ಡಾ. ಎಂ.ಆರ್. ಪಾಟೀಲ ಬಹುಮಾನ ವಿತರಿಸಿದರು. ಎಸಿಸಿಇ ಹುಬ್ಬಳ್ಳಿ ಸೆಂಟರ್ ಅಧ್ಯಕ್ಷ ಸುರೇಶ ಕಿರೇಸೂರ ಅಧ್ಯಕ್ಷತೆ ವಹಿಸಿದ್ದರು. ಅಶೋಕ ಬಸವಾ ಸ್ವಾಗತಿಸಿದರು. ಶ್ರೀಕಾಂತ ಪಾಟೀಲ ನಿರೂಪಿಸಿದರು. ಟೂರ್ನಾಮೆಂಟ್ ಸಂಚಾಲಕ ಉಳವಪ್ಪ ಸುಣಗಾರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts