More

    BBKS10: ಫಿನಾಲೆ ಓಟದಿಂದ ವರ್ತೂರ್ ಸಂತೋಷ್​​ ಔಟ್!​

    ಬೆಂಗಳೂರು: ಬಿಗ್ ಬಾಸ್​ ಕನ್ನಡ ಸೀಸನ್ 10ರ ವಿನ್ನರ್​ ಪಟ್ಟ ಯಾರಿಗೆ ಎಂಬ ಒಂದೇ ಒಂದು ಪ್ರಶ್ನೆ ಸದ್ಯ ವೀಕ್ಷಕರನ್ನು ಬೆಂಬಿಡದೆ ಕಾಡುತ್ತಿದ್ದು, ಯಾರಾಗಲಿದ್ದಾರೆ ಈ ಸೀಸನ್​ನ ಅಧಿಪತಿ ಎಂಬುದನ್ನು ಇಂದು ನಡೆಯುತ್ತಿರುವ ಫಿನಾಲೆಯ ಕಡೆಯ ಸಂಚಿಕೆಯ ಅಂತಿಮ ಕ್ಷಣದವರೆಗೂ ಕಾದು ನೋಡಬೇಕಿದೆ. ಈ ಮಧ್ಯೆ ಸಾಮಾಜಿಕ ಜಾಲತಾಣ ಸೇರಿದಂತೆ ಹಲವೆಡೆ ವಿನ್ನರ್​ ಪಟ್ಟಕ್ಕೆ ಕಾರ್ತಿಕ್​, ಸಂಗೀತಾ, ಪ್ರತಾಪ್​ ಹೆಸರುಗಳು ತೀವ್ರ ಚರ್ಚೆಯಾಗುತ್ತಿದ್ದು, ವಿನ್ನರ್ ಇವರೇ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ಕಟ್ಟಡ ತ್ಯಾಜ್ಯ ಸಮರ್ಪಕ ವಿಲೇವಾರಿಗೆ ಯೋಜನೆ

    ಈ ಮಧ್ಯೆ ಟಾಪ್ ಐದು ಸ್ಪರ್ಧಿಗಳ ಪೈಕಿ ಇದೀಗ ಮನೆಯಿಂದ ವರ್ತೂರು ಸಂತೋಷ್​ ಎಲಿಮಿನೇಟ್ ಆಗಿ ಹೊರಬಂದಿದ್ದು, ನಾಲ್ಕನೇ ರನ್ನರ್​ ಅಪ್ ಸ್ಥಾನವನ್ನು ಅಲಂಕರಿಸಿದ್ದಾರೆ. ಸಂತೋಷ್ ಅವರ ಇಲ್ಲಿಯವರೆಗಿನ ಪಯಣ ನೆನೆದ ಸುದೀಪ್​, ಗೆಲುವಿಗಾಗಿ ಕೊಟ್ಟ ಕೊಡುಗೆಯನ್ನು ಶ್ಲಾಘಿಸಿದ್ದಾರೆ. ಇದರೊಂದಿಗೆ ಸೀಸನ್​ 10ರ ಪಟ್ಟಕ್ಕೆ ಮುತ್ತಿಡುವ ಭಾಗ್ಯವನ್ನು ಕಳೆದುಕೊಂಡಿದ್ದಾರೆ. ಬಿರುಸಿನ ಪೈಪೋಟಿ ನೀಡಿದ ಸದ್ಯ ಎಲಿಮಿನೇಟ್​ ಆದ ವಿಷಯ ವೀಕ್ಷಕರಲ್ಲಿ ಭಾರೀ ಆಶ್ಚರ್ಯ ಉಂಟುಮಾಡಿದೆ.

    ಹಳ್ಳಿಕಾರ್ ಒಡೆಯ ಎಂಬ ಬಿರುದನ್ನು ಗಳಿಸಿಕೊಂಡಿದ್ದ ಸಂತೋಷ್, ಹಳ್ಳಿಕಾರ್ ತಳಿಯ ಹೈನುಗಳನ್ನು ಸಲುಹುತ್ತಿದ್ದಾರೆ. ಹಳ್ಳಿಕಾರ್ ರೇಸ್‌ನಿಂದ ಬಿಗ್‌ಬಾಸ್‌ ರೇಸ್‌ಗೆ ಬಂದಿದ್ದು ಖುಷಿಖುಷಿಯಾಗಿ ಇತ್ತ. ಆದರೆ ಈ ಮನೆಯೊಳಗೆ ಅವರ ದಿನಗಳಲ್ಲಿ ಖುಷಿಯಷ್ಟೇ ಇರಲಿಲ್ಲ. ಹಲವು ಭಾವಗಳು, ನೋವು-ನಲಿವುಗಳು ಕಂಡಿದ್ದಾರೆ.

    ಬಿಗ್‌ಬಾಸ್ ಮನೆಯೊಳಗೆ ಅಸಮರ್ಥರಾಗಿ ಒಳಗೆ ಹೋದವರು ಸಮರ್ಥರಾಗಿ ಹೊರಹೊಮ್ಮಿದರು. ಸತತ ಪ್ರಯತ್ನಗಳ ನಂತರ ಫಿನಾಲೆ ಹಂತ ತಲುಪಿದ್ದ ಸಂತೋಷ್​ ಈ ಪಯಣದ ಬಗ್ಗೆ ಭಾರೀ ಸಂತೋಷವಿದೆ ಎಂದು ಹೇಳಿದ್ದಾರೆ.

    ಇಲ್ಲಿದೆ ಟಾಪ್ 20 ಮಹಿಳಾ ಟೆನಿಸ್ ಆಟಗಾರರ ಪಟ್ಟಿ! ಇವರ ಹೆಸರುಗಳು ನಿಮಗೆ ಗೊತ್ತಿದೆಯೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts