ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10ರ ವಿನ್ನರ್ ಪಟ್ಟ ಯಾರಿಗೆ ಎಂಬ ಒಂದೇ ಒಂದು ಪ್ರಶ್ನೆ ಸದ್ಯ ವೀಕ್ಷಕರನ್ನು ಬೆಂಬಿಡದೆ ಕಾಡುತ್ತಿದ್ದು, ಯಾರಾಗಲಿದ್ದಾರೆ ಈ ಸೀಸನ್ನ ಅಧಿಪತಿ ಎಂಬುದನ್ನು ಇಂದು ನಡೆಯುತ್ತಿರುವ ಫಿನಾಲೆಯ ಕಡೆಯ ಸಂಚಿಕೆಯ ಅಂತಿಮ ಕ್ಷಣದವರೆಗೂ ಕಾದು ನೋಡಬೇಕಿದೆ. ಈ ಮಧ್ಯೆ ಸಾಮಾಜಿಕ ಜಾಲತಾಣ ಸೇರಿದಂತೆ ಹಲವೆಡೆ ವಿನ್ನರ್ ಪಟ್ಟಕ್ಕೆ ಕಾರ್ತಿಕ್, ಸಂಗೀತಾ, ಪ್ರತಾಪ್ ಹೆಸರುಗಳು ತೀವ್ರ ಚರ್ಚೆಯಾಗುತ್ತಿದ್ದು, ವಿನ್ನರ್ ಇವರೇ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಕಟ್ಟಡ ತ್ಯಾಜ್ಯ ಸಮರ್ಪಕ ವಿಲೇವಾರಿಗೆ ಯೋಜನೆ
ಈ ಮಧ್ಯೆ ಟಾಪ್ ಐದು ಸ್ಪರ್ಧಿಗಳ ಪೈಕಿ ಇದೀಗ ಮನೆಯಿಂದ ವರ್ತೂರು ಸಂತೋಷ್ ಎಲಿಮಿನೇಟ್ ಆಗಿ ಹೊರಬಂದಿದ್ದು, ನಾಲ್ಕನೇ ರನ್ನರ್ ಅಪ್ ಸ್ಥಾನವನ್ನು ಅಲಂಕರಿಸಿದ್ದಾರೆ. ಸಂತೋಷ್ ಅವರ ಇಲ್ಲಿಯವರೆಗಿನ ಪಯಣ ನೆನೆದ ಸುದೀಪ್, ಗೆಲುವಿಗಾಗಿ ಕೊಟ್ಟ ಕೊಡುಗೆಯನ್ನು ಶ್ಲಾಘಿಸಿದ್ದಾರೆ. ಇದರೊಂದಿಗೆ ಸೀಸನ್ 10ರ ಪಟ್ಟಕ್ಕೆ ಮುತ್ತಿಡುವ ಭಾಗ್ಯವನ್ನು ಕಳೆದುಕೊಂಡಿದ್ದಾರೆ. ಬಿರುಸಿನ ಪೈಪೋಟಿ ನೀಡಿದ ಸದ್ಯ ಎಲಿಮಿನೇಟ್ ಆದ ವಿಷಯ ವೀಕ್ಷಕರಲ್ಲಿ ಭಾರೀ ಆಶ್ಚರ್ಯ ಉಂಟುಮಾಡಿದೆ.
ಹಳ್ಳಿಕಾರ್ ಒಡೆಯ ಎಂಬ ಬಿರುದನ್ನು ಗಳಿಸಿಕೊಂಡಿದ್ದ ಸಂತೋಷ್, ಹಳ್ಳಿಕಾರ್ ತಳಿಯ ಹೈನುಗಳನ್ನು ಸಲುಹುತ್ತಿದ್ದಾರೆ. ಹಳ್ಳಿಕಾರ್ ರೇಸ್ನಿಂದ ಬಿಗ್ಬಾಸ್ ರೇಸ್ಗೆ ಬಂದಿದ್ದು ಖುಷಿಖುಷಿಯಾಗಿ ಇತ್ತ. ಆದರೆ ಈ ಮನೆಯೊಳಗೆ ಅವರ ದಿನಗಳಲ್ಲಿ ಖುಷಿಯಷ್ಟೇ ಇರಲಿಲ್ಲ. ಹಲವು ಭಾವಗಳು, ನೋವು-ನಲಿವುಗಳು ಕಂಡಿದ್ದಾರೆ.
ಬಿಗ್ಬಾಸ್ ಮನೆಯೊಳಗೆ ಅಸಮರ್ಥರಾಗಿ ಒಳಗೆ ಹೋದವರು ಸಮರ್ಥರಾಗಿ ಹೊರಹೊಮ್ಮಿದರು. ಸತತ ಪ್ರಯತ್ನಗಳ ನಂತರ ಫಿನಾಲೆ ಹಂತ ತಲುಪಿದ್ದ ಸಂತೋಷ್ ಈ ಪಯಣದ ಬಗ್ಗೆ ಭಾರೀ ಸಂತೋಷವಿದೆ ಎಂದು ಹೇಳಿದ್ದಾರೆ.
ಇಲ್ಲಿದೆ ಟಾಪ್ 20 ಮಹಿಳಾ ಟೆನಿಸ್ ಆಟಗಾರರ ಪಟ್ಟಿ! ಇವರ ಹೆಸರುಗಳು ನಿಮಗೆ ಗೊತ್ತಿದೆಯೇ?