More

    BBKS10: ‘ಹೋಗೋಲೆ ಅಂತೆಲ್ಲಾ ಮಾತಾಡಬೇಡಿ’!; ಜೋರಾಗ್ತಿದೆಯಾ ಕಾರ್ತಿಕ್​ ಧ್ವನಿ?

    ಬೆಂಗಳೂರು: ಬಿಗ್​ ಬಾಸ್​ ಮನೆಯಲ್ಲಿ ಮನಸ್ತಾಪ, ಅಸಮಾಧಾನ, ವಾಗ್ದಾಳಿಗಳು ದಿನದಿಂದ ದಿನಕ್ಕೆ ತೀವ್ರ ತಿರುವುಗಳನ್ನು ಪಡೆದುಕೊಳ್ಳುತ್ತಿದೆ.

    ಇದನ್ನೂ ಓದಿ: ಮಳೆಯ ಅಬ್ಬರ: ಈ ರಾಜ್ಯದ 8 ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಣೆ!

    ಮೊನ್ನೆಯಷ್ಟೇ ಸವಾಲು ಸ್ವೀಕರಿಸುವ ಟಾಸ್ಕ್​ನಲ್ಲಿ ಹಲ್ಲು ಕಚ್ಚಿಕೊಂಡು ಎದುರಾಳಿಗಳು ಕೊಟ್ಟ ಸವಾಲಿಗೆ ಅಸ್ತು ಎಂದು ಆಡಿದ ಸ್ಪರ್ಧಿಗಳು ತಮ್ಮ ತಮ್ಮ ಬೇಸರವನ್ನು ಆಟದ ಮೂಲಕ ಹೊರಹಾಕಿದರು. ಆದ್ರೆ, ಸಂಗೀತಾ ವಿನಯ್​, ನಮ್ರತಾ ಅವರೊಂದಿಗೆ ಕುಳಿತು ಮಾತನಾಡುತ್ತಿರುವುದು ಇದೀಗ ಜಗಳಗಳಿಗೆ ಪ್ರಮುಖ ಕಾರಣವಾದಂತಿದೆ. ಇಷ್ಟು ದಿನ ತನಿಷಾ ಹಾಗೂ ಕಾರ್ತಿಕ್​ ಜತೆಗಿದ್ದ ಸಂಗೀತಾ, ಒಂದಷ್ಟು ವಿಚಾರಗಳಿಗೆ ವಾಗ್ವಾದಕ್ಕಿಳಿದು ಇಬ್ಬರ ಸ್ನೇಹದಿಂದ ದೂರ ಉಳಿದಿದ್ದಾರೆ. ಇದೀಗ ಈ ವೈಮನಸ್ಸು ಟಾಸ್ಕ್​ನಲ್ಲಿ ಕಾಣಿಸುತ್ತಿರುವುದು ಅಂಗೈ ಹುಣ್ಣಿಗೆ ಕನ್ನಡಿ ಏಕೆ ಎನ್ನುವಂತಿದೆ.

    ನಿನ್ನೆಯ ಟಾಸ್ಕ್​ನಲ್ಲಿ ವಿನಯ್​ ಮತ್ತು ಕಾರ್ತಿಕ್​ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಹೊಡೆದಾಟ ಕೂಡ ಮಾಡಿಕೊಂಡರು ಎಂಬಂತೆ ಕಂಡಿದ್ದಂತು ಅಕ್ಷರಶಃ ಸತ್ಯ. ಕೋಪದ ಭರಾಟೆಯಲ್ಲಿ ಪದೇ ಪದೇ ಹೊರಬರುತ್ತಿರುವ ಕೆಟ್ಟ ಶಬ್ದಗಳ ಬಳಕೆ ಸದ್ಯ ಮನೆಯವರನ್ನು ಬೇಸರಕ್ಕೆ ದೂಡಿದ್ದು, ಈ ವಿಷಯ ನೋಡುಗರಿಗೂ ಒಂದು ರೀತಿ ಮುಜುಗರ ಉಂಟು ಮಾಡುತ್ತಿರಬಹುದು ಎಂದರೆ ತಪ್ಪಾಗಲಾರದು.

    ಇದನ್ನೂ ಓದಿ: ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ಕಂಬಳ; ಗೆದ್ದ ಕೋಣಗಳಿಗೆ ಕೊಡಲಾಗುವ ಬಹುಮಾನ ಎಷ್ಟು ಗೊತ್ತಾ?

    ಇಂದು ಮತ್ತೊಂದು ಟಾಸ್ಕ್​ನಲ್ಲಿ ಉಸ್ತುವಾರಿ ವಹಿಸಿದ್ದ ಪ್ರತಾಪ್​ ಹಾಗೂ ಕ್ಯಾಪ್ಟನ್​ ಮಧ್ಯೆ ಬಿರುಸಿನ ಮಾತು ನಡೆದಿದ್ದು, ಜೋಡಿಯಾಗಿ ಚೆಂಡನ್ನು ಕೋಲಿನಿಂದ ಹಿಡಿದು ತಮಗೆ ಮೀಸಲಿಟ್ಟಿರುವ ಬಾಕ್ಸ್​ನೊಳಗೆ ಹಾಕಬೇಕು ಎಂಬುದು ಚುಟುವಟಿಕೆಯ ನಿಯಮ. ಈ ರೂಲ್ಸ್​ನಲ್ಲಿ ಕಾರ್ತಿಕ್​ ಎಡವಿದರು ಎಂದು ಪ್ರತಾಪ್​ ಹೇಳಿದ್ದಕ್ಕೆ ‘ಹೋಗೋಲೋ ಆಯ್ತು’ ಎಂದು ಕಾರ್ತಿಕ್​ ಹೇಳಿದರು.

    ಕಾರ್ತಿಕ್​ ಹೇಳಿಕೆಗೆ ತಕ್ಷಣವೇ ಪ್ರತಿಕ್ರಿಯಿಸಿದ ಪ್ರತಾಪ್​, ‘ಹೋಗೋಲೋ ಅಂತೆಲ್ಲಾ ಹೇಳಬೇಡಿ’ ಎಂದು ಹೇಳಿದ್ದಾರೆ. ಜೋರು ಧ್ವನಿಯಲ್ಲಿ ಕೇಳಿಬಂದ ಕಾರ್ತಿಕ್​ ಮಾತು ಯಾವ ಹಂತವನ್ನು ತಲುಪಿದೆ? ಭಾರೀ ಜಟಾಪಟಿಗೆ ಕಾರಣವಾಯಿತಾ? ಎಂಬುದನ್ನು ಇಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ. ದಿನದ 24 ಗಂಟೆಗಳ ಲೈವ್​ ಸ್ಟ್ರೀಮಿಂಗ್​ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.

    ಮಳೆಯ ಅಬ್ಬರ: ಈ ರಾಜ್ಯದ 8 ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಣೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts