ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ 173 ಕೋಟಿ ರೂ. ಸೇರಿ ಒಕ್ಕೂಟದ 6 ಬ್ಯಾಂಕ್ಗಳಿಗೆ ಒಟ್ಟು 411 ಕೋಟಿ ರೂ. ಪಂಗನಾಮ ಹಾಕಿರುವ ರಾಮ್ ದೇವ್ ಇಂಟರ್ನ್ಯಾಷನಲ್ ಕಂಪನಿಯ ಮೂವರು ಆರೋಪಿಗಳು ವಿದೇಶಕ್ಕೆ ಪರಾರಿಯಾಗಿದ್ದಾರೆ ಎಂದು ಸಿಬಿಐ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಪಶ್ಚಿಮ ಏಷ್ಯಾ ಮತ್ತು ಯೂರೋಪಿಯನ್ ದೇಶಗಳಿಗೆ ಬಾಸುಮತಿ ಅಕ್ಕಿ ರಫ್ತು ಮಾಡುವ ಈ ಕಂಪನಿಯು ಎಸ್ಬಿಐ, ಕೆನರಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಐಡಿಬಿಐ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕಾರ್ಪೋರೇಶನ್ ಬ್ಯಾಂಕ್ಗಳಿಗೆ ಒಟ್ಟು 411 ಕೋಟಿ ರೂ. ಸಾಲ ಪಾವತಿಸಬೇಕಿದೆ. ಈ ಪೈಕಿ ಎಸ್ಬಿಐಗೆ 173 ಕೋಟಿ ರೂ. ಬರಬೇಕಿದೆ. 2016ರ ಜನವರಿಯಿಂದ ಸಾಲ ಪಾವತಿಸದ ಈ ಕಂಪನಿಯು ಅನುತ್ಪಾದಕ ಆಸ್ತಿ (ಎನ್ಪಿಎ) ಪಟ್ಟಿಗೆ ಸೇರಿದೆ.
ಇದನ್ನೂ ಓದಿ ಪೊಲೀಸರ ಪಾಡು ಹೇಳತೀರದ್ದು..; ಕೈಚೆಲ್ಲಿ ಕುಳಿತಿದ್ದಾರೆ ಮುಖ್ಯಮಂತ್ರಿ
4 ವರ್ಷಗಳ ನಂತರ ಅಂದರೆ ಕಳೆದ ಆಗಸ್ಟ್ ಮತ್ತು ಅಕ್ಟೋಬರ್ನಲ್ಲಿ ಬ್ಯಾಂಕ್ಗಳು ಜಂಟಿಯಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ವಂಚನೆ ಬಯಲಾಗಿದೆ. ಕರ್ನೂಲ್ನಲ್ಲಿದ್ದ ಘಟಕಗಳ ಬಾಗಿಲು ಹಾಕಿ ಆರೋಪಿಗಳು ಪರಾರಿಯಾಗಿದ್ದಾರೆ. ಈ ಘಟಕಗಳ ಬಳಿ ಹರಿಯಾಣ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಬ್ಯಾಂಕ್ಗೆ ಹಣ ಪಾವತಿಸದೆ ವಂಚಿಸಿದ ಕಂಪನಿ ಮತ್ತು ನಿರ್ದೇಶಕರಾದ ನರೇಶ್ ಕುಮಾರ್, ಸುರೇಶ್ ಕುಮಾರ್, ಸಂಗಿತಾ ವಿರುದ್ಧ
ಎಸ್ಬಿಐ 2020ರ ಫೆಬ್ರವರಿ 25ರಂದು ಸಿಬಿಐಗೆ ದೂರು ದಾಖಲಿಸಿತ್ತು. ಈ ಮೂವರೂ ತಲೆಮರೆಸಿಕೊಂಡಿದ್ದಾರೆ.
ಇದನ್ನೂ ಓದಿ ಅಧಿಕಾರಿಗಳು ಕರೆ ಸ್ವೀಕರಿಸಿದ್ದರೆ ಬದುಕಿ ಬರುತ್ತಿದ್ದರೆ 16 ವಲಸೆ ಕಾರ್ಮಿಕರು?
ಕರೊನಾ ಲಾಕ್ಡೌನ್ ಇದ್ದ ಕಾರಣ ಬ್ಯಾಂಕ್ಗಳಿಗೆ ವಂಚನೆ ಪ್ರಕರಣ ತನಿಖೆ ವಿಳಂಬವಾಗಿತ್ತು. ಆರೋಪಿಗಳು ತನಿಖೆಗೆ ಹಾಜರಾಗದಿದ್ದಲ್ಲಿ ಸಮನ್ಸ್ ಜಾರಿ ಮಾಡಲಾಗುವುದು ಎಂದು ಸಿಬಿಐ ತಿಳಿಸಿದೆ.
ಕಂಪನಿಯು ಹರಿಯಾಣದ ಕಾರ್ನಾಲ್ ಜಿಲ್ಲೆಯಲ್ಲಿ 3 ಅಕ್ಕಿ ಗಿರಣಿ, ಅಕ್ಕಿ ವಿಂಗಡಣೆ ಮತ್ತು ಶ್ರೇಣೀಕರಣ ಮಾಡುವ 8 ಘಟಕ ಹೊಂದಿದೆ. ವ್ಯಾಪಾರ ಉದ್ದೇಶಗಳಿಗಾಗಿ ಸೌದಿ ಅರೇಬಿಯಾ ಮತ್ತು ದುಬೈನಲ್ಲಿ ಕಚೇರಿಗಳನ್ನು ಹೊಂದಿದೆ.(ಏಜೆನ್ಸೀಸ್)
ಇದನ್ನೂ ಓದಿ ತಬ್ಲಿಘಿಗಳಿಂದ ಹಿಂದು ಯುವಕ ಮತಾಂತರ