ತಾವರಗೇರಾ: ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿಯಲ್ಲಿ ಸರ್ಕಾರದ ಆದೇಶದಂತೆ ಬಸವಣ್ಣನ ಭಾವಚಿತ್ರವನ್ನು ಶನಿವಾರ ಅನಾವರಣಗೊಳಿಸಲಾಯಿತು.
ಇದನ್ನೂ ಓದಿ: ಭಾವಚಿತ್ರ ಅನಾವರಣ ಕಾರ್ಯಕ್ರಮ ಅವಾಂತರ
ಪ.ಪಂ. ಸಿಬ್ಬಂದಿ ಶರಣಬಸವ ಸೈಂದರ್, ಮರೇಶ, ಶಾಮೂರ್ತಿ ಕಟ್ಟಿಮನಿ, ಅಬ್ದುಲ್ ಖಾದರ್, ಪ್ರಲ್ಲಾದ ಜೋಶಿ ಇದ್ದರು.
ನಾಡ ಕಚೇರಿಯಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರ ಅನಾವರಣಗೊಳಿಸಲಾಯಿತು. ನಾಡ ತಹಸೀಲ್ದಾರ್ ಶರಣಬಸವೇಶ್ವರ ಕಳಿಮಠ, ಗ್ರಾಮ ಲೆಕ್ಕಾಧಿಕಾರಿ ಸೂರ್ಯ ಕಾಂತ, ಜಯಶ್ರೀ, ಕಂದಾಯ ನಿರೀಕ್ಷಕ ಶರಣಪ್ಪ ದಾಸರ್ ಇದ್ದರು.