More

    ಪಕ್ಷದ ಬೆಳವಣಿಗೆಗೆ ಕಾರ್ಯಾಲಯ ಸ್ಫೂರ್ತಿ ತಾಣ

    ಬಸವನಬಾಗೇವಾಡಿ: ಕಾರ್ಯಕರ್ತರು, ಪಕ್ಷದ ಅಭಿಮಾನಿಗಳು ಹಾಗೂ ಪದಾಧಿಕಾರಿಗಳು ಒಂದೆಡೆ ಕುಳಿತು ಪಕ್ಷದ ಕಾರ್ಯವಿಸ್ತಾರಕ್ಕೆ ಚಿಂತನೆ ಮಾಡುವ ಕಾರ್ಯಾಲಯ ಹಾಗೂ ಸಂಪರ್ಕ ಕೇಂದ್ರಗಳು ಪಕ್ಷದ ಬೆಳವಣಿಗೆಗೆ ಸ್ಫೂರ್ತಿ ತಾಣವಾಗಿವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ (ಕೂಚಬಾಳ) ಹೇಳಿದರು.

    ಪಟ್ಟಣದ ತೆಲಗಿ ರಸ್ತೆಯ ಗಣಾಚಾರಿ ಕಾಂಪ್ಲೆಕ್ಸ್‌ನಲ್ಲಿ ಬಿಜೆಪಿ ಮಂಡಲ ಕಾರ್ಯಾಲಯ ಹಾಗೂ ಸಂಪರ್ಕ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. ರಾಜಕೀಯ ಕ್ಷೇತ್ರದಲ್ಲಿ ಬಿಜೆಪಿ ದೇಶಭಕ್ತಿ ಮುಖಾಂತರ ವಿಭಿನ್ನವಾಗಿ ಗುರುತಿಸಿಕೊಳ್ಳುವ ಜತೆಗೆ ಕಾರ್ಯಕರ್ತರೇ ಪಕ್ಷದ ಜೀವಾಳ ಎಂದು ಕಾರ್ಯಕರ್ತರಿಗೆ ಆದ್ಯತೆ ನೀಡಿದ ಏಕೈಕ ಪಕ್ಷವಾಗಿದ್ದು, ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಜನತೆ ಒಂದೆಡೆ ಸೇರಲು ತಾಲೂಕು ಮಟ್ಟದಲ್ಲಿ ಕಾರ್ಯಾಲಯ ತೆರೆಯಲಾಗುತ್ತಿದೆ ಎಂದು ಹೇಳಿದರು.

    ಮಂಡಲ ಅಧ್ಯಕ್ಷ ಶಂಕರಗೌಡ ಪಾಟೀಲ ಮಾತನಾಡಿ, ಹಣದಿಂದ ಪಕ್ಷದ ಬೆಳವಣಿಗೆ ಸಾಧ್ಯವಿಲ್ಲ. ನಿಷ್ಠೆ-ಪರಿಶ್ರಮದ ಮುಖಾಂತರ ಪಕ್ಷದ ಸಂಘಟನೆಗೆ ಒತ್ತು ನೀಡಿ ಬಿಜೆಪಿ ನೇತೃತ್ವದ ಸರ್ಕಾರ ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರ ಹಿಡಿಯಲು ಎಲ್ಲ ಕಾರ್ಯಕರ್ತರ ನಿರಂತರ ಪ್ರಯತ್ನ ಅವಶ್ಯಕವಾಗಿದೆ ಎಂದರು.

    ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಜಿಲ್ಲಾ ಉಪಾಧ್ಯಕ್ಷರಾದ ಸಂಗನಗೌಡ ಚಿಕ್ಕೊಂಡ, ಬಸವರಾಜ ಬೈಚಬಾಳ, ಪುರಸಭೆ ಸದಸ್ಯ ನೀಲಪ್ಪ ನಾಯಕ, ತಾಪಂ ಸದಸ್ಯ ಅಮೃತ ಯಾದವ, ಬಸವರಾಜ ಬಿಜಾಪುರ, ಪರಶುರಾಮ ಜಮಖಂಡಿ, ರಾಜು ಮುಳವಾಡ, ಭೂನ್ಯಾಯ ಮಂಡಳಿ ಸದಸ್ಯ ಅರವಿಂದ ಕೊಪ್ಪದ, ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಸಾವಿತ್ರಿ ಕಲ್ಯಾಣಶೆಟ್ಟಿ, ಜಿಪಂ ಮಾಜಿ ಸದಸ್ಯ ಶಿವಾನಂದ ಅವಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts