ಬೆಂಗಳೂರು: ಕೋವಿಡ್ ಸಮಯದಲ್ಲಿ ರಾಜ್ಯದ ಜನತೆಗೆ ನೆರವಾಗುತ್ತಿರುವ ಕರೊನಾ ವಾರಿಯರ್ಸ್ ಸೇವೆಯನ್ನು ಗುರುತಿಸುವುದರ ಜತೆಗೆ ಅವರಿಗೆ ಗೌರವ ತೋರುವ ಸಲುವಾಗಿ ಹಲವರು ಹಾಡುಗಳನ್ನು ಮಾಡಿದ್ದಾರೆ. ಯೋಗರಾಜ್ ಭಟ್, ಸ್ಟೀಫನ್ ಪ್ರಯೋಗ್ ರಾಜ್, ಪವನ್ ಒಡೆಯರ್ ಸೇರಿದಂತೆ ಹಾಡಿನ ಮೂಲಕ ಗೌರವ ಸಲ್ಲಿಸಿದ್ದಾರೆ. ಈಗ ಈ ಸಾಲಿಗೆ ಸುಶೀಲ್ ಸಾಗರ್ ಸಹ ಸೇರಿದ್ದಾರೆ.
ಇದನ್ನೂ ಓದಿ: ಸೆಕ್ಸ್ ಸೀನ್ ಶೂಟಿಂಗೂ ಮುನ್ನ ರಾಧಿಕಾ ಆಪ್ಟೆ ಜತೆ ನಡೆದ ರಹಸ್ಯ ಮಾತುಕತೆ ಬಿಚ್ಚಿಟ್ಟ ನಟ!
ಕೋವಿಡ್ ಎರಡನೆಯ ಅಲೆಯಿಂದ ತತ್ತರಿಸಿರುವರ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ಕರೊನಾ ವಾರಿಯರ್ಸ್ಗಳ ಸೇವೆಯನ್ನು ಶ್ಲಾಘಿಸುವುದರ ಜತೆಗೆ, ಅವರಿಗೆ ಗೌರವ ತೋರುವ ಸಲುವಾಗಿ ‘ಭರವಸೆಯ ಒಂದು ಬೆಳಕು’ ಎಂಬ ಹಾಡೊಂದನ್ನು ಸಮರ್ಪಿಸಿದ್ದಾರೆ.
‘ಭರವಸೆಯ ಒಂದು ಬೆಳಕು’ ಹಾಡು ಈಗಾಗಲೇ ಮೇ 29ರಂದು ಯೂಟ್ಯೂಬ್ನ ಸಿಟಿ ಸವಾರಿ ಚಾನಲ್ನಲ್ಲಿ ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ವಸಿಷ್ಠ ಸಿಂಹ, ಅನುಪಮಾ ಗೌಡ, ಶೈನ್ ಶೆಟ್ಟಿ, ರಘು ಗೌಡ, ಹಿತಾ ಚಂದ್ರಶೇಖರ್, ಕಿರಣ್ ಶ್ರೀನಿವಾಸ್, ಚೈತ್ರಾ ವಾಸುದೇವನ್ ಕಾಣಿಸಿಕೊಂಡಿದ್ದಾರೆ. ಇನ್ನು, ಈ ಹಾಡಿಗೆ ಎಸ್. ರಂಜನಿ ಸಾಹಿತ್ಯ ಬರೆದರೆ, ಆಕಾಶ್ ಪರ್ವ ಸಂಗೀತ ಸಂಯೋಜಿಸಿದ್ದಾರೆ. ಅಶ್ವಿನ್ ಶರ್ಮ, ಐಶ್ವರ್ಯ ರಂಗರಾಜನ್ ಮತ್ತು ಆಶಾ ಭಟ್ ಈ ಹಾಡನ್ನು ಹಾಡಿದ್ದಾರೆ.
ಇದನ್ನೂ ಓದಿ: ಇನ್ನು ಮುಂದೆ ಶಾಲೆಗೆ ಹೋಗಲ್ಲ ಎಂದು ಸೋನಾಕ್ಷಿ ಹಠ ಹಿಡಿದಿದ್ದು ಯಾಕೆ?
ಈ ಹಾಡಿಗೆ ಈಗಾಗಲೇ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಹಾಡು ಕೇಳಿ ಹೊಸ ಚೈತನ್ಯ ಬಂದಂತಾಗಿದೆ ಎಂದು ಹಲವರು ಹೇಳಿಕೊಂಡಿದ್ದಾರೆ ಎಂದು ಈ ಹಾಡನ್ನು ರೂಪಿಸಿರುವ ಸುಶೀಲ್ ಸಾಗರ್ ಹೇಳುತ್ತಾರೆ.