ಚಿಕ್ಕಮಗಳೂರು: ಗ್ರಾಹಕರ ಅಗತ್ಯ ಹಾಗೂ ಸಂತೃಪ್ತಿ ಅರಿತರೆ ಯಾವುದೆ ವ್ಯವಹಾರದಲ್ಲಿ ಸೋಲಿಲ್ಲ. ಉತ್ತಮ ಕಾರ್ಯಕ್ಷಮತೆ ಹಾಗೂ ಸೇವೆಯಿಂದ ಅಭಿವೃದ್ಧಿ ಹೊಂದಬಹುದು ಎಂದು ಎಐಟಿ ಪ್ರೊ. ಡಾ. ಸಿ.ಟಿ.ಜಯದೇವ್ ಹೇಳಿದರು.
ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕರ್ಣಾಟಕ ಬ್ಯಾಂಕ್ನ ಐದನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಹಕರೇ ಇಲ್ಲದಿದ್ದರೆ ಯಾವ ವ್ಯವಹಾರವೂ ಇರುವುದಿಲ್ಲ. ಗ್ರಾಹಕರೇ ದೇವರೆಂಬಂತೆ ನಡೆದುಕೊಂಡರೆ ವ್ಯವಹಾರ ಉನ್ನತಿ ಹೊಂದುತ್ತದೆ. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ ಇನ್ನಷ್ಟು ಪ್ರಗತಿ ಸಾಧಿಸಲಿ ಎಂದರು.
ಬ್ಯಾಂಕ್ ಶಾಖಾ ಪ್ರಬಂಧಕ ಶ್ರೀಪಾದ್ ಮಾತನಾಡಿ, ಕಲ್ಯಾಣನಗರದಂತಹ ಚಿಕ್ಕ ಬಡಾವಣೆಯಲ್ಲಿ ಆರಂಭವಾದ ಬ್ಯಾಂಕ್ ಶಾಖೆ ಕೇವಲ ಐದು ವರ್ಷಗಳಲ್ಲಿ 5 ಸಾವಿರ ಗ್ರಾಹಕರನ್ನು ಹೊಂದಿ 36 ಕೋಟಿ ರೂ. ವ್ಯವಹಾರ ಮಾಡಿರುವುದು ಹೆಮ್ಮೆ ಎನಿಸುತ್ತದೆ. ಗ್ರಾಹಕರು ಹಾಗೂ ಬ್ಯಾಂಕ್ ಸಿಬ್ಬಂದಿ ಪರಿಶ್ರಮವೇ ಇದಕ್ಕೆ ಕಾರಣ ಎಂದು ತಿಳಿಸಿದರು.
ಐಡಿಎಸ್ಜಿ ಕಾಲೇಜು ಉಪನ್ಯಾಸಕ ಡಾ. ಬಿ.ಪಿ.ರಮೇಶ್, ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಎಸ್.ಜಲಜಾಕ್ಷಿ, ಶಿವಮೊಗ್ಗ ಶ್ರೀನಿವಾಸ್, ಸá-ಧೀರ್, ಪೂರ್ಣಿಮಾ, ಯಶಸ್ವಿನಿ, ಸುನೀಲ್, ಶಾಂತಾ, ಮದನ್, ರಂಜನಾ, ಚಂದನ್, ಗ್ರಾಹಕರಾದ ಡಿ.ಕೆ.ಕೃಷ್ಣಮೂರ್ತಿ, ಗುರುಮೂರ್ತಿ, ಅನಿಲ್, ಆನಂದ್ ಇದ್ದರು.