More

    ನದಿಯಲ್ಲಿ ಸ್ನಾನಕ್ಕಿಳಿದ ಬೆಂಗಳೂರಿನ ಯುವಕ ನಾಪತ್ತೆ

    ಸುಬ್ರಹ್ಮಣ್ಯ(ದ.ಕ): ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ನದಿಯಲ್ಲಿ ಭಾನುವಾರ ಮಧ್ಯಾಹ್ನ ಸ್ನಾನಕ್ಕಿಳಿದಿದ್ದ ಬೆಂಗಳೂರಿನ ಯುವಕ ಕಣ್ಮರೆಯಾಗಿದ್ದಾನೆ.
    ಮಂಡ್ಯ ಮೂಲದ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ದೀಪಾಂಜಲಿ ನಗರ ನಿವಾಸಿ ಶಿವು(25) ಕಣ್ಮರೆಯಾದವರು.

    ಬೆಂಗಳೂರಿನಿಂದ ಟೂರಿಸ್ಟ್ ವಾಹನದಲ್ಲಿ 21 ಮಂದಿ ಹೊರನಾಡು, ಶೃಂಗೇರಿ, ಕೊಲ್ಲೂರು, ಮುರುಡೇಶ್ವರ, ಆನೆಗುಡ್ಡೆ, ಉಡುಪಿ, ಕಟೀಲು, ಧರ್ಮಸ್ಥಳ, ಸೌತಡ್ಕ ಕ್ಷೇತ್ರಗಳಿಗೆ ತೆರಳಿ ಕುಕ್ಕೆಗೆ ಭಾನುವಾರ ಆಗಮಿಸಿದ್ದರು. ಕುಕ್ಕೆಯಲ್ಲಿ ದೇವರ ದರ್ಶನ ಪಡೆದು ಭೋಜನ ಸ್ವೀಕರಿಸಿದ್ದ ತಂಡ ಬಳಿಕ 2.45ರ ಸುಮಾರಿಗೆ ಕುಮಾರಧಾರಾ ನದಿಯಲ್ಲಿ ಸ್ನಾನಕ್ಕಿಳಿದ ವೇಳೆ ಘಟನೆ ಸಂಭವಿಸಿದೆ. ಯುವಕ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ.

    ಎಚ್ಚರಿಸಿದ್ದ ಸಿಬ್ಬಂದಿ: ಗೃಹರಕ್ಷಕ ದಳ ಸಿಬ್ಬಂದಿ ಹಗ್ಗ ಕಟ್ಟಿದ ಸ್ಥಳದಲ್ಲಿ ನೀರಿಗಿಳಿಯದಂತೆ ಎಚ್ಚರಿಸಿದ್ದರೂ, ಯುವಕರು ನದಿ ದಡದಲ್ಲಿ ಸ್ನಾನ ಮಾಡಿದ್ದರು, ಈ ಪೈಕಿ ಶಿವು ಸ್ನಾನ ಮುಗಿಸಿದ ಬಳಿಕ ಗೆಳೆಯರು ಬೇಡವೆಂದು ಹೇಳಿದರೂ ನದಿಗೆ ಹಾರಿದ್ದು, ಸ್ವಲ್ಪ ದೂರ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದಾನೆ.

    ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹಾಗೂ ಸ್ಥಳೀಯ ಈಜುಪಟುಗಳು ಭಾನುವಾರ ರಾತ್ರಿ ತನಕ ಹುಡುಕಾಟ ನಡೆಸಿದರೂ ಶಿವು ಪತ್ತೆಯಾಗಿಲ್ಲ. ರಾತ್ರಿಯಾದ್ದರಿಂದ ಹುಡುಕಾಟ ನಿಲ್ಲಿಸಲಾಯಿತು. ಸ್ಥಳಕ್ಕೆ ಕಡಬ ಉಪತಹಸೀಲ್ದಾರ್ ಮನೋಹರ್, ವಿಎ ರವಿಚಂದ್ರ ಭೇಟಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts