More

    ಜತೆಯಲ್ಲೇ ತಿಂಡಿ ತಿಂದ ಸ್ನೇಹಿತೆಯರು; ಕೆಲವೇ ಕ್ಷಣದಲ್ಲಿ ನದಿಯಲ್ಲಿ ಶವ ಪತ್ತೆ, ಮತ್ತೊಬ್ಬಳು ಕಣ್ಮರೆ

    ಬೆಂಗಳೂರು: ಬೇಕರಿಯೊಂದರಲ್ಲಿ ಸ್ನ್ಯಾಕ್ಸ್ ತಿಂದು ನಗುನಗುತ್ತಲೇ ಹೊರಟ ಸ್ನೇಹಿತೆಯರಿಬ್ಬರ ಪೈಕಿ ರಾಜೇಶ್ವರಿ ಎಂಬ ಯುವತಿ ಬೆಂಗಳೂರು ಹೊರವಲಯ ಆನೇಕಲ್ ಮತ್ತು ಹೊಸಕೋಟೆ ತಾಲೂಕಿನ ಗಡಿ ಭಾಗದಲ್ಲಿ ಹರಿಯುವ ದಕ್ಷಿಣ ಪಿನಾಕಿನಿ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮತ್ತೊಬ್ಬ ಸ್ನೇಹಿತೆಗಾಗಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ತೀವ್ರ ಶೋಧ ಮುಂದುವರೆಸಿದ್ದಾರೆ.

    ಮಾಲೂರು ತಾಲೂಕು ಲಕ್ಕೂರು ಸರ್ಕಾರಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ರಾಜೇಶ್ವರಿ ಸ್ನೇಹಿತೆ ಜತೆಗೆ ಮುಗಳೂರಿಗೆ ಬಂದಿದ್ದರು ಎನ್ನಲಾಗಿದೆ. ಮಂಗಳವಾರ ಸಂಜೆ ಸ್ನೇಹಿತೆಯರಿಬ್ಬರು ಬೇಕರಿಯಲ್ಲಿ ನಗುನಗುತ್ತಾ ಸ್ನ್ಯಾಕ್ಸ್ ತಿನ್ನುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಲ್ಲಿಂದ ತೆರಳಿದ ಕೆಲವೇ ಗಂಟೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.

    ಇದು ಆತ್ಮಹತ್ಯೆಯೇ ಅಥವಾ ಇದರ ಹಿಂದೆ ಕೊಲೆಯ ಹೆಜ್ಜೆ ಗುರುತುಗಳಿವೆಯೇ ಎಂಬ ಬಗ್ಗೆ ಅನುಗೊಂಡನಹಳ್ಳಿ ಠಾಣೆ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಆದರೆ ಕೆಲವೇ ಗಂಟೆಗಳ ಮುಂಚೆ ನಗುನಗುತ್ತಾ ಹೊರಟ ವಿದ್ಯಾರ್ಥಿನಿ ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

    19 ಕ್ರಿಮಿನಲ್ ಪ್ರಕರಣಗಳಲ್ಲಿ ಬೇಕಾಗಿದ್ದ ಮೋಸ್ಟ್ ವಾಂಟೆಡ್ ನಕ್ಸಲ್​ ಎನ್​ಕೌಂಟರ್​ಗೆ ಬಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts