More

    ಪ್ರೇಮಿಗಳ ದಿನ ಹುತಾತ್ಮ ದಿನಾಚರಣೆ

    ಮಂಗಳೂರು: ಪ್ರೇಮಿಗಳ ದಿನಾಚರಣೆ ಬೇಡ ಎಂದಿರುವ ಬಜರಂಗದಳ, ಜಮ್ಮುವಿನ ಪುಲ್ವಾಮದಲ್ಲಿ 2019ರಲ್ಲಿ ಭಯೋತ್ಪಾದಕರ ದಾಳಿಗೆ 44 ಸಿಆರ್‌ಪಿಎಫ್ ಯೋಧರು ಬಲಿಯಾದ ದಿನ ಫೆ.14ರಂದು ರಾಜ್ಯದಾದ್ಯಂತ ‘ಪುಲ್ವಾಮ ಹುತಾತ್ಮರ ದಿನಾಚರಣೆ’ ಆಚರಿಸುವಂತೆ ಕರೆ ನೀಡಿದೆ.

    ಸಂಘಟನೆ ಕಾರ್ಯಕರ್ತರು ರಾಜ್ಯದಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಹುತಾತ್ಮರ ದಿನಾಚರಣೆ ಕಾರ‌್ಯಕ್ರಮ ಸಂಘಟಿಸಲಿದ್ದಾರೆ ಎಂದು ಸಂಘಟನೆ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ್ ಸುನೀಲ್ ಕೆ.ಆರ್. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಬಲಿದಾನವಾದ ಸೈನಿಕರನ್ನು ಎಲ್ಲರೂ ನೆನಪು ಮಾಡಿಕೊಳ್ಳುವ ಮತ್ತು ಅವರ ಕುಟುಂಬಕ್ಕೆ ಗೌರವ ಸಲ್ಲಿಸುವ ಉದ್ದೇಶದಿಂದ ವರ್ಷಂಪ್ರತಿ ಫೆ.14ರಂದು ಪುಲ್ವಾಮ ಹುತಾತ್ಮ ದಿನ ಆಚರಿಸುವಂತೆ ಕೇಂದ್ರ ಸರ್ಕಾರಕ್ಕೆ ಗೃಹ ಸಚಿವರಿಗೆ ಪತ್ರದ ಮೂಲಕ ಮನವಿ ಮಾಡಿಕೊಳ್ಳಲಿದ್ದೇವೆ ಎಂದರು.

    ಪ್ರೇಮಿಗಳ ದಿನ ಬೇಡ: ಪ್ರೇಮಿಗಳ ದಿನಾಚರಣೆ ಮೂಲಕ ಭಾರತದ ಮೇಲೆ ಬಹುದೊಡ್ಡ ಮಟ್ಟದ ಪಾಶ್ಚಿಮಾತ್ಯ ಸಂಸ್ಕೃತಿಯ ದಾಳಿ ನಡೆಯುತ್ತಿದೆ. ಪ್ರೇಮಿಗಳ ದಿನಾಚರಣೆಗೆ ಬಜರಂಗದಳದ ತೀವ್ರ ವಿರೋಧವಿದೆ. ಈ ಸಂಬಂಧ ಕೊಡುಗೆ ನೀಡುವ ಗ್ರೀಟಿಂಗ್ಸ್ ಮತ್ತು ವಸ್ತುಗಳನ್ನು ಮಾರಾಟ ಮಾಡದಂತೆ ಸುನೀಲ್ ಅಂಗಡಿ ಮಾಲೀಕರಲ್ಲಿ ಮನವಿ ಮಾಡಿಕೊಂಡರು.

    ಬಜರಂಗದಳ ಮಂಗಳೂರು ವಿಭಾಗ ಸಂಯೋಜಕ್ ಭುಜಂಗ ಕುಲಾಲ್, ದಕ್ಷಿಣ ಕನ್ನಡ ಜಿಲ್ಲಾ ಸಂಯೋಜಕ್ ಪುನೀತ್ ಅತ್ತಾವರ ಮತ್ತು ಉಡುಪಿ ಜಿಲ್ಲಾ ಸಂಯೋಜಕ್ ದಿನೇಶ್ ಮೆಂಡನ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts