ಬಾಗಲಕೋಟೆ: ಲಾಕ್ಡೌನ್ ಹಿನ್ನೆಲೆಯಲ್ಲಿ ಹಳ್ಳಿಗಳಲ್ಲಿ ರಸ್ತೆ ಬಂದ್ ಮಾಡಿರುವ ಪರಿಣಾಮ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧೆಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೇ ಸಾವಿಗಿಡಾಗಿರುವ ಘಟನೆ ತೇರದಾಳದಲ್ಲಿ ಭಾನುವಾರ ನಡೆದಿದೆ.
ತೇರದಾಳ ಪಟ್ಟಣದ ನಿವಾಸಿ ನಿರ್ಮಲಾ ತೆಳಗಿನಮನಿ(61) ಚಿಕಿತ್ಸೆ ಸಿಗದೆ ಮೃತಪಟ್ಟ ಮಹಿಳೆ. ಹೃದಯದ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತೇರದಾಳದಿಂದ ಬೆಳಗಾವಿ ಜಿಲ್ಲೆ ಹಾರೂಗೇರಿ ಗ್ರಾಮದ ಆಸ್ಪತ್ರೆಗೆ ಕಾರಿನಲ್ಲಿ ಹೊರಟಿದ್ದರು.
ಲಾಕ್ಡೌನ್ ಹಿನ್ನೆಲೆಯಲ್ಲಿ ಯಾವುದೇ ಮಾರ್ಗವಾಗಿ ಹೋದರು ಕಲ್ಲು, ಮುಳ್ಳು ಹಾಗೂ ಮಣ್ಣು ಹಾಕಿ ಗ್ರಾಮದ ರಸ್ತೆಗಳನ್ನು ಬಂದ್ ಮಾಡಿರುವುದರಿಂದ ಎಲ್ಲಾ ಕಡೆ ಸುತ್ತಿದರೂ ಹಾರೋಗೇರಿಗೆ ಹೋಗಲು ಅವಕಾಶ ಸಿಗದೆ, ಮಾರ್ಗದಲ್ಲೇ ಮಹಿಳೆ ಅಸುನೀಗಿದ್ದಾರೆ. (ದಿಗ್ವಿಜಯ ನ್ಯೂಸ್)
ಡ್ರೋಣ್ ಮೂಲಕ ಬಂತು ಪಾನ್ಮಸಾಲಾ: ಪ್ರೇಮಿಗಳು ಫುಲ್ ಖುಷ್, ಹಂಚಿದವರು ಅಂದರ್!