More

    ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ

    ಬಾಗಲಕೋಟೆ: ಬಾಗಲಕೋಟೆ ಮತಕ್ಷೇತ್ರ ವ್ಯಾಪ್ತಿಯ ಹುನಗುಂದ ತಾಲೂಕಿನ ಅಮೀನಗಡ ಮತ್ತು ಕಮತಗಿ ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದ ಎಸ್‌ಎ್ಸಿ ವಿಶೇಷ ಅನುದಾನದಡಿ ತಲಾ 2.50 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ವೀರಣ್ಣ ಚರಂತಿಮಠ ಶುಕ್ರವಾರ ಚಾಲನೆ ನೀಡಿದರು.

    ಅಮೀನಗಡ ಮತ್ತು ಕಮತಗಿ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಸಿಸಿ ರಸ್ತೆ, ಪ್ಲೇವರ್ ಬ್ಲಾಕ್, ಚರಂಡಿ ನಿರ್ಮಾಣ, ಕಾಬಲ್ ಸ್ಟೋನ್ ಅಳವಡಿಕೆ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರಸ್ತೆ ಮಧ್ಯವಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಬೇಕು. ತಾಂತ್ರಿಕ ಸಮಸ್ಯೆಗಳು ಇದ್ದಲ್ಲಿ ಅವುಗಳನ್ನು ಸರಿಪಡಿಸಿಕೊಂಡು ನಿಗದಿತ ಅವಧಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

    ನಗರಾಭಿವೃಧ್ಧಿ ಕೋಶದ ಯೋಜನಾ ನಿರ್ದೇಶಕ ಗಣಪತಿ ಪಾಟೀಲ, ತಹಸೀಲ್ದಾರ್ ಬಸವರಾಜ ನಾಗರಾಳ, ಅಮೀನಗಡ ಪಪಂ ಮುಖ್ಯಾಧಿಕಾರಿ ಐ.ಬಿ. ಕೊಣ್ಣೂರ, ಕಮತಗಿ ಪಪಂ ಮುಖ್ಯಾಧಿಕಾರಿ ಬಿ.ಟಿ. ಬಂಡಿವಡ್ಡರ, ಪಪಂ ಸದಸ್ಯರಾದ ಸಂಗಣ್ಣ ಗಾಣಿಗೇರ, ಪ್ರಕಾಶ ಗುಳೇದಗುಡ್ಡ, ಗಂಗಾಧರ ಕ್ಯಾದಿಗೇರಿ, ನಾಗರತ್ನ ಪೂಜಾರಿ, ಜಾನಕಿ ಕುಮಚಗಿ, ವಿಜಯಲಕ್ಷ್ಮೀ ಕುಮಚಗಿ ಇತರರು ಉಪಸ್ಥಿತರಿದ್ದರು.

    ಹೊಸ ಜೆಸಿಬಿ ಯಂತ್ರಕ್ಕೆ ಚಾಲನೆ
    ಅಮೀನಗಡ ಪಟ್ಟಣ ಪಂಚಾಯಿತಿಗೆ 14ನೇ ಹಣಕಾಸು ಯೋಜನೆಯಡಿ 28.60 ಲಕ್ಷ ರೂ.ನಲ್ಲಿ ಖರೀದಿಸಲಾದ ಹೊಸ ಜೆಸಿಬಿ ಯಂತ್ರಕ್ಕೆ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts