More

    ಕೆಲಸ ಮಾಡಿದರೂ ಜನ ನನ್ನ ಮುಖ್ಯಮಂತ್ರಿ ಮಾಡಲಿಲ್ಲ; ಮಾಜಿ ಸಿಎಂ ಸಿದ್ದರಾಮಯ್ಯ ಬೇಸರ

    ಬಾಗಲಕೋಟೆ: ಕೊಟ್ಟ ಭರವಸೆಯಂತೆ ಕೆಲಸ ಮಾಡಿದರೂ ಸಹ ಜನ ನನ್ನನ್ನು ಮತ್ತೆ ಸಿಎಂ ಆಗಲೂ ಬಿಡಲಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬೇಸರಿಸಿದರು.

    ಗುರುವಾರ ಸುದ್ದಿಗಾರರ ಜತೆ ಮಾತನಾಡಿ, ಏನೂ ಕೆಲಸ ಮಾಡದಿದ್ದರೂ ಸಹ ಬಿಜೆಪಿಗೆ ಮತ ಹಾಕುತ್ತಾರೆ. ಗೋವುನಕೊಪ್ಪ ಪಂಚಾಯಿತಿ ಮಾಡಲು ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಅಂತಿಮವಾಗಿತ್ತು. ಆದರೆ ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ ಮನಸ್ಸು ಮಾಡಲಿಲ್ಲ ಎಂದು ದೂರಿದರು.

    ಸರ್ಕಾರದಲ್ಲಿ ಯಡಿಯೂರಪ್ಪ, ಈಶ್ವರಪ್ಪ ಎಲ್ಲ ಅಪ್ಪಗಳು ಕೂಡಿ ಬಿಟ್ಟಿದ್ದಾರೆ. ನಾನು ಕೆಲಸ ಮಾಡಿ ಅಂತ ಹೇಳುತ್ತಿದ್ದೇನೆ, ಆದರೆ ಯಡಿಯೂರಪ್ಪ ಕೆಲಸ ಮಾಡುತ್ತಿಲ್ಲ. ಇವರಿಗೆ ಇನ್ನೂ ಹೇಗೆ ಹೇಳಬೇಕು ನೀವೆ ಹೇಳಿ ಎಂದರು.

    ರಾಜ್ಯಕ್ಕೆ ಇಷ್ಟು ತಿಂಗಳಾದರೂ ಸಹ ನೆರೆ ಪರಿಹಾರ ಹಂಚಿಕೆಯಾಗಿಲ್ಲ. ರಾಜ್ಯ ಸರ್ಕಾರ 36 ಸಾವಿರ ಕೋಟಿ ರೂ.ಕೇಳಿದರೆ, ಬಕಾಸೂರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ಕೇಂದ್ರ ಸರ್ಕಾರ 1,863 ಕೋಟಿ ರೂ. ನೀಡಿದೆ. ರಾಜ್ಯದಿಂದ 25 ಸಂಸದರು ಗೆದ್ದರೂ ಸಹ ಒಮ್ಮೆಯಾದರೂ ಪರಿಹಾರಕ್ಕೆ ಆಗ್ರಹಿಸಿ ಕೇಂದ್ರದ ವಿರುದ್ಧ ಗಟ್ಟಿ ಧ್ವನಿ ಎತ್ತಿದ್ದಾರಾ ಎಂದು ಪ್ರಶ್ನಿಸಿದರು.

    ನಾನು ಸಿಎಂ ಆಗಿದ್ದರೆ ನೆರೆ ಪರಿಹಾರಕ್ಕೆ ಪ್ರಧಾನಿ ಮನೆ ಮುಂದೆ ಧರಣಿ ಕುಳಿತುಕೊಳ್ಳುತ್ತಿದ್ದೆ. ಇವರು ಮಾತೆತ್ತಿದ್ರೆ ದುಡ್ಡಿಲ್ಲ ಅನ್ನುತ್ತಾರೆ. ನಮ್ಮ ಕಾಲದಲ್ಲಿ ಖಜಾನೆ ತುಂಬಿ ತುಳುಕುತ್ತಿತ್ತು. ಯಡಿಯೂರಪ್ಪ ಸಿಎಂ ಆಗಿ ಆರು ತಿಂಗಳು ಕಳೆಯಲಿ, ಆ ಮೇಲೆ ಬೀದಿಗೆ ಇಳಿದು ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts