More

    ಸ್ವಗ್ರಾಮಕ್ಕೆ ಆಗಮಿಸಿದ ಕೂಲಿ ಕಾರ್ಮಿಕರು

    ಬಾದಾಮಿ: ಪಟ್ಟಣಕ್ಕೆ ಶುಕ್ರವಾರ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಆಗಮಿಸಿದ 196 ಜನರನ್ನು ಬಸ್ ನಿಲ್ದಾಣದಲ್ಲಿ ವೈದ್ಯರು ತಾತ್ಕಾಲಿಕ ಪರೀಕ್ಷೆ ಮಾಡಿ ಅವರವರ ಗ್ರಾಮಕ್ಕೆ ತೆರಳಲು ಅನುಮತಿ ನೀಡಿದರು.

    ತಾಲೂಕಿನ ಮತ್ತಲಗೇರಿ, ಕರಡಿಗುಡ್ಡ ಎಸ್.ಎನ್, ಹೊಸೂರ, ಆಲದಕಟ್ಟಿ ಗ್ರಾಮದ ಜನರು ಕೂಲಿ ಕೆಲಸಕ್ಕಾಗಿ ಗೋವಾ ಮತ್ತು ಮಂಗಳೂರು ನಗರಕ್ಕೆ ಕುಟುಂಬ ಸಮೇತ ತೆರಳಿದ್ದರು. ಲಾಕ್‌ಡೌನ್‌ನಿಂದ ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿ ಶುಕ್ರವಾರ ಸ್ವಗ್ರಾಮಕ್ಕೆ ಮರಳಿದರು.

    ವೈದ್ಯ ಡಾ.ರೇವಣಸಿದ್ದಪ್ಪ ಮಾತನಾಡಿ, ಸ್ವಗ್ರಾಮದಲ್ಲಿ ಆಶಾ ಕಾರ್ಯಕರ್ತರನ್ನು ಭೇಟಿಯಾಗಿ ಅಲ್ಲಿಯ ಸಮೀಪದ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಟ್ಟು ನಂತರ 14 ದಿನ ಹೋಮ್ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಲಾಯಿತು ಎಂದರು.

    ತಹಸೀಲ್ದಾರ್ ಸುಹಾಸ ಇಂಗಳೆ, ಪುರಸಭೆ ಮುಖ್ಯಾಧಿಕಾರಿ ಜ್ಯೋತಿ ಗಿರೀಶ ಹಾಗೂ ಪೊಲೀಸರು ತಪಾಸಣೆ ವೇಳೆ ಉಪಸ್ಥಿತರಿದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts