More

    ಬಾದಾಮಿಯಲ್ಲಿ ಬಸ್‌ಗಳಿಗೆ ಅಲಂಕಾರ

    ಬಾದಾಮಿ: 65ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಇಲ್ಲಿನ ಸಾರಿಗೆ ಇಲಾಖೆ ಬಸ್ ಘಟಕದಲ್ಲಿ ಬಸ್‌ಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಬಸ್ ಕಿಟಕಿಗಳಲ್ಲಿ ಕನ್ನಡ ವಿಷಯದಲ್ಲಿ ಜ್ಞಾನ ಪೀಠ ಪ್ರಶಸ್ತಿ ವಿಜೇತರ ಭಾವಚಿತ್ರಗಳನ್ನು ಅಂಟಿಸಿ ಹೂಮಾಲೆ ಹಾಕಿ ನಮಿಸಲಾಯಿತು. ಕನ್ನಡ ನಾಡು ನುಡಿಗಳು, ಭಾವಗೀತೆಗಳನ್ನು ಧ್ವನಿ ವರ್ಧಕ ಮೂಲಕ ಪ್ರಸಾರ ಮಾಡಲಾಯಿತು. ಹೋರಾಟಗಾರರು, ಸಾಹಿತ್ಯ ದಿಗ್ಗಜರ ಭಾವಚಿತ್ರಗಳ ಅನಾವರಣ ಮಾಡಲಾಗಿತ್ತು. ತಾಲೂಕು ಕಸಾಪ ಅಧ್ಯಕ್ಷ ರವಿ ಕಂಗಳ, ಘಟಕ ವ್ಯವಸ್ಥಾಪಕ ಡಿ.ಬಿ. ಬಿರಾದಾರ, ಎನ್.ಎ. ದಿಬ್ಬದಮನಿ, ಡಿ.ವೈ. ಹೊಸಮನಿ, ಸದಾಶಿವ ಮರಡಿ, ರಮೇಶ ಕತ್ತಿಕೈ ಸೇರಿ ಘಟಕದ ಸಿಬ್ಬಂದಿ ಹಾಜರಿದ್ದರು.

    ಬಿ.ಆರ್.ಸಿ ಕೇಂದ್ರದಲ್ಲಿ 65ನೇ ಕನ್ನಡ ರಾಜ್ಯೋತ್ಸವ ಸರಳವಾಗಿ ಆಚರಿಸಲಾಯಿತು. ಪ್ರೌಢ ಶಿಕ್ಷಣ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಎಸ್.ವೈ. ಮಡಿವಾಳರ, ಡಿ.ಬಿ. ಹಡಗಲಿ, ಬಿ.ಎ್. ಕುಂಬಾರ, ಎನ್.ಡಿ. ಬೀಳಗಿ, ಆನಂದಸ್ವಾಮಿ, ಎಸ್.ವಿ. ಉದಗಟ್ಟಿ, ಪಿ.ಟಿ. ನೀಲಗುಂದ ಹಾಜರಿದ್ದರು.

    ಪಟ್ಟಣ ಸಮೀಪದ ಬನಶಂಕರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 65ನೇ ಕನ್ನಡ ರಾಜ್ಯೋತ್ಸವವನ್ನು ತಾಯಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸರಳವಾಗಿ ಆಚರಿಸಲಾಯಿತು. ಮುಖ್ಯಶಿಕ್ಷಕಿ ಪಿ.ಎನ್. ಚಳಗೇರಿ, ಸಹಶಿಕ್ಷಕರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts