ಬಾದಾಮಿ: ಪಟ್ಟಣದ ಹೊರವಲಯದ ಬಾದಾಮಿ-ಬಾಗಲಕೋಟೆ ಮುಖ್ಯ ರಸ್ತೆಯ ಹೆರಿಟೇಜ್ ಹೋಟೆಲ್ ಎದುರು ಗುರುವಾರ ಬೈಕ್ ಸವಾರನೊಬ್ಬ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದಾರೆ.
ಸಮೀಪದ ತಟಗೋಟಿ ಗ್ರಾಮದ ಶ್ರೀಧರ ಅಮೃತ ಪಾಟೀಲ (26) ಮೃತಪಟ್ಟ ದುರ್ದೈವಿ. ವೇಗದಲ್ಲಿ ತಿರುವು ಪಡೆಯಲು ಹೋಗಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಸಿಪಿಐ ರಮೇಶ ಹಾನಾಪುರ, ಪಿಎಸ್ಐ ನೇತ್ರಾವತಿ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.