More

    ಮನೆ ಬೆಕ್ಕಿಗೆ ಸೀಮಂತ ಮಾಡಿದ ದಂಪತಿ..!

    ಚಾಮರಾಜನಗರ: ಸೀಮಂತ ಎಂದರೆ ಉತ್ಸಾಹ, ಸಂತೋಷದ ಒಂದು ಕಾರ್ಯಕ್ರಮ. ಮನೆಗೆ ಹೊಸ ವ್ಯಕ್ತಿಯ ಆಗಮನದ ಸಂತೋಷ ಈ ಸಮಾರಂಭದ ಹಿಂದಿರುತ್ತೆ.
    ಈಗಿನ ಕಾಲದಲ್ಲಿ ಪ್ರಾಣಿ ಪ್ರಿಯರು ಸಾಕು ಪ್ರಾಣಿಗಳನ್ನು ಮನೆಯ ಸದಸ್ಯರಂತೆ ನೊಡುತ್ತಾರೆ. ಇದೇ ಹಿನ್ನೆಲೆ ಇಟ್ಟುಕೊಂಡು ಸಾಕು ನಾಯಿಯನ್ನು ಕೇದಾರನಾಥಕ್ಕೂ ಕರೆದುಕೊಂಡು ಹೋದ ಉದಾಹರಣೆಗಳು ಇವೆ. ಆದರೆ ಇಲ್ಲಿ ಈ ದಂಪತಿ ತಮ್ಮ ಪ್ರಾಣಿ ಪ್ರೀತಿಯನ್ನು ಮತ್ತೊಂದು ಹಂತಕ್ಕೆ ಏರಿಸಿದ್ದಾರೆ.

    ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿಯಲ್ಲಿ ವಿಶೇಷ ಸೀಮಂತ ಕಾರದ್ಯಕ್ರಮ ನಡೆದಿದ್ದು ಇಲ್ಲಿ ಗರ್ಭಿಣಿ ಆಗಿರುವುದು ಮಾತ್ರ ಮನೆಯ ಬೆಕ್ಕು! ವೆಂಕಟರಮಣಶೆಟ್ಟಿ- ನಿರ್ಮಲಾ ದಂಪತಿಗಳು ಬೆಕ್ಕಿಗೆ ಸೀಮಂತ ಮಾಡಿಸಿದ್ದಾರೆ. ಈ ದಂಪತಿಗೆ ಇಬ್ಬರು ಗಂಡುಮಕ್ಕಳಿದ್ದು ಹೆಣ್ಣು ಮಕ್ಕಳಿಲ್ಲ.

    ಈ ಹಿನ್ನೆಲೆಯಲ್ಲಿ ತಮ್ಮ ಮನೆಯ ಬೆಕ್ಕಿಗೆ ಈ ದಂಪತಿ ಸೀಮಂತ ಮಾಡಿಸಿದ್ದಾರೆ. ಬೆಕ್ಕಿಗೆ ಹೊಸಬಟ್ಟೆ ತೊಡಿಸಿ ಫಲತಾಂಬೂಲ ಇಟ್ಟು ಸಂಪ್ರದಾಯದಂತೆ ಸೀಮಂತ ಮಾಡಿದ್ದು ನಂತರ ದಂಪತಿಗಳು ಆರತಿ ಬೆಳಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts