ನವದೆಹಲಿ : ಯೋಗ ಗುರು ಹಾಗೂ ಪತಂಜಲಿ ಆಯುರ್ವೇದ ಕಂಪೆನಿಯ ಬಾಬಾ ರಾಮದೇವ್ ಮತ್ತು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್(ಐಎಂಎ) ನಡುವಿನ ಕಲಹ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಅಲೋಪಥಿ ವೈದ್ಯರ ಬಗೆಗಿನ ತಮ್ಮ ಟೀಕೆಯ ವಿರುದ್ಧ ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಎಫ್ಐಆರ್ಗಳನ್ನು ತಡೆ ಹಿಡಿಯಲು ಕೋರಿ ರಾಮ್ದೇವ್ ಅವರು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.
ಕರೊನಾ ಚಿಕಿತ್ಸೆಯಲ್ಲಿ ವೈದ್ಯರು ಬಳಸುವ ಔಷಧಿಗಳ ಬಗ್ಗೆ ಸುಳ್ಳು ಮಾಹಿತಿಯನ್ನು ಹರಡುವ ಪ್ರಯತ್ನ ಮಾಡಿದ್ದಾರೆ ಎಂದು ಐಎಂಎ ಪಟ್ನಾ ಮತ್ತು ರಾಯ್ಪುರ ಶಾಖೆಗಳು ರಾಮ್ದೇವ್ ವಿರುದ್ಧ ದೂರು ದಾಖಲಿಸಿವೆ. ಈ ದೂರುಗಳ ಆಧಾರದ ಮೇಲೆ ಪೊಲೀಸರು ದರ್ಜು ಮಾಡಿರುವ ಎಫ್ಐಆರ್ಗಳನ್ನು ತಡೆಹಿಡಿಯಬೇಕು, ಹಾಗೂ ದೆಹಲಿಗೆ ವರ್ಗಾಯಿಸಬೇಕು ಎಂದು ರಾಮ್ದೇವ್ ತಮ್ಮ ಅರ್ಜಿಯಲ್ಲಿ ಕೋರಿದ್ದಾರೆ. (ಏಜೆನ್ಸೀಸ್)
ಬ್ಲ್ಯಾಂಕ್ ಫಂಗಸ್ ಔಷಧಿ : ರಾಜ್ಯಕ್ಕೆ ಹೆಚ್ಚುವರಿ 5,240 ವಯಲ್ಸ್ ಹಂಚಿಕೆ