ಬೆಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆಯ ಮಹಾಪೂರವೇ ಹರಿದುಬರುತ್ತಿದ್ದು, ಈ ಬಗ್ಗೆ ಮಾತನಾಡಿರುವ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಂದಿರ ನಿರ್ಮಾಣಕ್ಕೆ ಸದ್ಯ 2,100 ಕೋಟಿ ರೂ. ಸಂಗ್ರಹವಾಗಿದೆ ಎಂದು ತಿಳಿಸಿದರು.
ರಾಷ್ಟ್ರ ಧರ್ಮ ಸಂಸ್ಥೆ ಲಾಲ್ಬಾಗ್ ಪಶ್ಚಿಮ ದ್ವಾರದ ಬಳಿ ಅನಂತವಾಣದಲ್ಲಿ ಆಯೋಜಿಸಿರುವ ನಿಧಿ ಸಮರ್ಪಣ ಅಭಿಯಾನ ಸಮಾರೋಪ ಸಮಾರಂಭವನ್ನು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿರಿ: ರೈತರ ಜೀವನ ಜತೆ ಚೆಲ್ಲಾಟವಾಡುತ್ತಿರುವ ಮೋದಿ – ಶಾಸಕ ರಾಘವೇಂದ್ರ ಹಿಟ್ನಾಳ್ ಆರೋಪ
ರಾಮ ಭಕ್ತರರಿಂದ ರಾಮಮಂದಿರ ನಿರ್ಮಾಣಕ್ಕೆ ಸದ್ಯ 2,100 ಕೋಟಿ ರೂ. ಸಂಗ್ರಹವಾಗಿದೆ. 2,500 ಕೋಟಿ ರೂ.ಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಮೇಲು, ಕೀಳೆನ್ನದೆ, ಜಾತಿ, ಬೇಧ ಮತ್ತು ಧರ್ಮವನ್ನು ಮರೆತು ಮಂದಿರ ನಿರ್ಮಾಣಕ್ಕೆ ಎಲ್ಲರು ಒಟ್ಟಾಗಿ ದೇಣಿಗೆಯನ್ನು ನೀಡಿದ್ದಾರೆ. ಬಡವರು ಸಹ ತಮ್ಮ ಕೈಲಾದಷ್ಟು ನೆರವಿನ ಹಸ್ತ ಚಾಚಿದ್ದಾರೆಂದು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
2ನೇ ಹಂತದ ಕರೊನಾ ಲಸಿಕೆ ಅಭಿಯಾನ : ಇಲ್ಲಿದೆ, ನಿಮ್ಮ ಪ್ರಶ್ನೆಗಳಿಗೆ ಉತ್ತರ
ಭಾರತಕ್ಕೆ ಅಮೆರಿಕ ಮರಳಿಸಬೇಕಿದೆ 15 ಲಕ್ಷ ಕೋಟಿ ರೂಪಾಯಿ! ದೊಡ್ಡಣ್ಣನ ಪ್ರಜೆಗಳ ತಲೆ ಮೇಲೆ ತಲಾ 53 ಲಕ್ಷ ರೂ. ಸಾಲ!
90 ಲಕ್ಷ ರೂ.ಗೆ ಸೈಟ್ ಖರೀದಿಸಿ ವೈದ್ಯನ ಮನೆಗೆ ಸುರಂಗ ಕೊರೆದ ಖದೀಮರು ಹಣ, ಚಿನ್ನ ಮುಟ್ಟಲೇ ಇಲ್ಲ!