ಬಾಳೆಹೊನ್ನೂರು: ಮತದಾನದ ಕುರಿತು ಯುವಜನರಲ್ಲಿ ಜಾಗೃತಿ ಮೂಡಿಸಿ ಮತದಾನದ ಪ್ರಮಾಣ ಹೆಚ್ಚಾಗುವಂತೆ ಮಾಡುವುದು ಅಗತ್ಯ ಎಂದು ಎಸ್ಜೆಆರ್ ಕಾಲೇಜು ಪ್ರಾಚಾರ್ಯ ಕೆ.ಆರ್.ಬೂದೇಶ್ ಹೇಳಿದರು.
ಪಟ್ಟಣದ ಎಸ್ಜೆಆರ್ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಕ್ಕು ಚಲಾಯಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಇದರ ಮಹತ್ವವನ್ನು ಅರಿತು ಚುನಾವಣೆಗಳಲ್ಲಿ ಮತ ಚಲಾಯಿಸಬೇಕು ಎಂದರು.
ಉಪನ್ಯಾಸಕ ಕೆ.ಎಂ.ರಾಕೇಶ್ ಮಾತನಾಡಿ, ಯುವ ಮತದಾರರನ್ನು ಉತ್ತೇಜಿಸಲು, ಜಾಗೃತಿ ಮೂಡಿಸಲು, ಚುನಾವಣಾ ಆಯೋಗದ ಸ್ಥಾಪನೆಯನ್ನು ನೆನಪಿಸುವ ಉದ್ದೇಶದಿಂದ 2011ರಿಂದ ಪ್ರತಿ ವರ್ಷ ಜ.25ರಂದು ಮತದಾರರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಉಪನ್ಯಾಸಕರಾದ ಭಾರತಿ, ಪ್ರಶಾಂತಕುಮಾರ್, ಶಿಕ್ಷಕ ಬಿ.ಎಸ್.ಕುಮಾರಚಂದ್ರ ನಾಯಕ್, ನಟರಾಜ್ ನಾಯ್ಕ ಇತರರಿದ್ದರು.