More

    ಅವಲಕ್ಕಿ ಪವಲಕ್ಕಿಯಲ್ಲಿ ಆಂಜನೇಯನ ಸ್ಮರಣೆ; ರಘುದೀಕ್ಷಿತ್ ಕಂಠದಿಂದ ಬಂತು ವಿಶೇಷ ಗೀತೆ..

    ಬೆಂಗಳೂರು: ಶ್ರೀ ಪ್ರಣವ್ ಪಿಕ್ಚರ್ಸ್ ಲಾಂಛನದಲ್ಲಿ ರಂಜಿತಾ ಸುಬ್ರಹ್ಮಣ್ಯ ನಿರ್ಮಿಸಿರುವ ‘ಅವಲಕ್ಕಿ ಪವಲಕ್ಕಿ’ ಚಿತ್ರದಲ್ಲಿ ಆಂಜನೇಯನನ್ನು ಸ್ಮರಿಸುವ ವೀರಶೂರನೇ ಹನುಮ ಎಂಬ ಹಾಡು ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಸಂದೀಪ್ ಎಸ್ ಅಯ್ಯರ್ ಈ ಹಾಡು ಬರೆದಿದ್ದಾರೆ. ಖ್ಯಾತ ಗಾಯಕ ರಘುದೀಕ್ಷಿತ್ ಈ ಹಾಡನ್ನು ಇಂಪಾಗಿ ಹಾಡಿದ್ದು, ಜುಬಿನ್ ಪಾಲ್ ಸಂಗೀತ ನೀಡಿದ್ದಾರೆ. ಸದ್ಯ ಯೂಟ್ಯೂಬ್​ನಲ್ಲಿ ಹಾಡಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಇದನ್ನೂ ಓದಿ: ಮನುಷ್ಯನ ಗುಣಾವಗುಣ ತಿಳಿಸಲಿದೆಯಂತೆ ‘ಮಿಸ್ಟರ್ ಡಿ’ ಸಿನಿಮಾ…

    ನನ್ನ ಹಾಡಿನ ಜರ್ನಿಯಲ್ಲೇ ಉತ್ತಮ ಹಾಗೂ ಕಠಿಣವಾದ ಹಾಡು ಇದು. ಎಲ್ಲರಿಗೂ ಖಂಡಿತ ಇಷ್ಟವಾಗುತ್ತದೆ. ಹನುಮ ಜಯಂತಿ ಮೊದಲಾದ ಹಬ್ಬಗಳಿಗೆ ಹೇಳಿ ಮಾಡಿಸಿದ ಹಾಗಿದೆ ಈ ಹಾಡು. ಇಂತಹ ಹಾಡು ಕೊಟ್ಟ ಸಂಗೀತ ನಿರ್ದೇಶಕರಿಗೆ ವಂದನೆಗಳು. ಇಡೀ ತಂಡಕ್ಕೆ ಶುಭಾಶಯಗಳು ಎಂದಿದ್ದಾರೆ ರಘುದೀಕ್ಷಿತ್.

    ಇದನ್ನೂ ಓದಿ: ‘ಲವ್ ಬರ್ಡ್ಸ್’ಗೆ ಪವರ್ ಸ್ಪರ್ಶ; ಡಾರ್ಲಿಂಗ್ ಕೃಷ್ಣ ಚಿತ್ರಕ್ಕೆ ಪುನೀತ್ ಹಾರೈಕೆ

    ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಟ್ರೇಲರ್​ಗೂ ಅಪಾರ ಮೆಚ್ಚುಗೆಯೂ ದೊರಕಿದೆ. ಸದ್ಯದಲ್ಲೇ ಚಿತ್ರಮಂದಿರಗಳಲ್ಲಿ ಅವಲಕ್ಕಿ ಪವಲಕ್ಕಿ ಅನಾವರಣಗೊಳ್ಳಲಿದೆ. ದುರ್ಗಾ ಪ್ರಸಾದ್ ಈ ಚಿತ್ರದ ನಿರ್ದೇಶಕರು. ನಿರೀಕ್ಷಿತ್ ಛಾಯಾಗ್ರಹಣ, ಶಾಂತ ಕುಮಾರ್ ಸಂಕಲನ ಹಾಗೂ ಮಂಜುನಾಥ್ ಶಿಂಧೆ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ದೀಪಕ್ ಪಟೇಲ್, ಸಮರ್ಥ್ ರಾಮಪುರ, ಭಾರಧ್ವಾಜ, ಶ್ರೇಯಾ, ಇಂದಿರಾ ನಾಯರ್, ರಾಘವೇಂದ್ರ, ಸಿಂಚನಾ, ಪ್ರವೀಣ್, ಪ್ರಿಯಾ ಶಂಕರ್, ಉದಯಕುಮಾರ್, ನಾಗರಾಜ್ ಭಂಡಾರಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts