ತಿರುವನಂತಪುರ: ದಿನವಿಡೀ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ ಚಾಲಕನೊಬ್ಬನಿಗೆ ಇದೀಗ ಭಾಗ್ಯದ ಬಾಗಿಲು ತೆರೆದಿದೆ. ಅದರಲ್ಲೂ ಆತನ ಅದೃಷ್ಟ ಸಾಮಾನ್ಯದ್ದಲ್ಲ. ಏಕೆಂದರೆ ಆತನಿಗೆ ಲಾಟರಿಯಲ್ಲಿ ಬರೋಬ್ಬರಿ 25 ಕೋಟಿ ರೂ. ಬಂದಿದೆ.
ಕೇರಳ ಸರ್ಕಾರದ ಓಣಂ ವಿಶೇಷ ಲಾಟರಿಯಲ್ಲಿ ತಿರುವನಂತಪುರದ ಆಟೋಚಾಲಕ ಅನೂಪ್ 25 ಕೋಟಿ ರೂ. ಬಂಪರ್ ಬಹುಮಾನಕ್ಕೆ ಪಾತ್ರನಾಗಿದ್ದಾನೆ. ಈತ ಪತ್ನಿ, ಮಗು ಹಾಗೂ ತಾಯಿಯೊಂದಿಗೆ ಜೀವನ ನಡೆಸುತ್ತಿದ್ದು, ಇದೀಗ ಲಾಟರಿ ಬಂಪರ್ ಬಹುಮಾನದಿಂದಾಗಿ ಈ ಕುಟಂಬದ ಭಾಗ್ಯದ ಬಾಗಿಲು ತೆರೆದಂತಾಗಿದೆ.
ಸ್ಥಳೀಯ ಪಝವಂಗಡಿ ಗಣೇಶ ದೇವಸ್ಥಾನ ಬಳಿಯ ಏಜೆಂಟ್ನಿಂದ ಈತ ಟಿಕೆಟ್ ಖರೀದಿಸಿದ್ದು, ಟಿಕೆಟ್ ಕೊಟ್ಟ ಸಬ್ ಏಜೆಂಟ್ ಈತನ ಹತ್ತಿರದ ಸಂಬಂಧಿ. ತೆರಿಗೆ ಮೊತ್ತ ಕಡಿತದ ಬಳಿಕ ಅನೂಪ್ ಸುಮಾರು 15 ಕೋಟಿ ರೂ. ಬಹುಮಾನವಾಗಿ ಪಡೆಯಲಿದ್ದಾನೆ. ಕಳೆದ ವರ್ಷದ ಓಣಂ ಬಂಪರ್ ಪ್ರೈಜ್ ಕೂಡ ಆಟೋಚಾಲಕನ ಪಾಲಾಗಿತ್ತು. ಪಿ.ಆರ್. ಜಯಪಾಲನ್ ಎಂಬಾತ ಬಂಪರ್ ಬಹುಮಾನ ಗಳಿಸಿದ್ದ.
ರಾಜ್ಯಾದ್ಯಂತ ಮಕ್ಕಳ ಕಳ್ಳರು?; ಜನರ ಕೈಗೆ ಸಿಕ್ಕಿಹಾಕಿಕೊಂಡ ಇಬ್ಬರ ಪೈಕಿ ಒಬ್ಬನ ಜೇಬಲ್ಲಿದ್ದವು ಮಕ್ಕಳ ಫೋಟೋಗಳು!
ಯೂಟ್ಯೂಬ್ನಲ್ಲಿ ಉಪ್ಪಿ ಹವಾ: ‘ಕಬ್ಜ’ ಟೀಸರ್ ನಂ. 1 ಟ್ರೆಂಡಿಂಗ್; 24 ಗಂಟೆಗಳಲ್ಲಿ 1 ಕೋಟಿಗೂ ಅಧಿಕ ವ್ಯೂಸ್..