More

    ರಾಮಮಂದಿರ ಉದ್ಘಾಟನೆಗೆ ವಿವಿಐಪಿ ಪಾಸ್ ಸೋಗಿನಲ್ಲಿ ವಂಚನೆಗೆ ಯತ್ನ

    ಬೆಂಗಳೂರು: ಆಯೋಧ್ಯೆ ಶ್ರೀರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ವಿಐಪಿ ಪಾಸ್ ಕೊಡುವುದಾಗಿ ಸೈಬರ್ ಕಳ್ಳರು, ಲಿಂಕ್ ಕಳುಹಿಸಿ ಮೋಸ ಮಾಡಲು ಹೊಸ ಗಾಳ ಬಳಸಿದ್ದಾರೆ. ಯಾಮಾರಿ ಲಿಂಕ್ ಮೇಲೆ ಕ್ಲಿಕ್ ಮಾಡಿದರೇ ಬ್ಯಾಂಕ್ ಖಾತೆಗೆ ಕನ್ನ ಬೀಳುವುದು ಖಚಿತವಾಗಿದೆ.

    ಜನವರಿ 22ಕ್ಕೆ ಬಾಲರಾಮನ ಪ್ರಾಣಪ್ರತಿಷ್ಠೆ ದೇಶ, ವಿದೇಶದಲ್ಲಿ ಗಮನ ಸೆಳೆದಿದೆ. ಕೋಟ್ಯಂತರ ಭಕ್ತರು ಆಯೋಧ್ಯಗೆ ಹೋಗುವ ತುಡಿತ ಶುರುವಾಗಿದೆ. ಗೂಗಲ್‌ನಲ್ಲಿ ಸಹ ಆಯೋಧ್ಯೆ ಕುರಿತು ಸರ್ಚ್ ನಡೆಸುವರ ಸಂಖ್ಯೆಯೂ ಟ್ರಂಡ್‌ನಲ್ಲಿ ಇದೆ. ಇದನ್ನೇ ದುರ್ಬಳಕ್ಕೆ ಮಾಡಿಕೊಂಡ ಸೈಬರ್ ಕಳ್ಳರು, ರಾಮ ಭಕ್ತರಿಗೆ ವಂಚನೆ ಮಾಡಲು ನಾನಾ ರೂಪದಲ್ಲಿ ಗಾಳ ಎಸೆಯುತ್ತಿದ್ದಾರೆ. ಈ ಬಗ್ಗೆ ರಾಜ್ಯ ಪೊಲೀಸ್ ಇಲಾಖೆ ಸಹ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ.

    ನಿಮ್ಮ ಮೊಬೈಲ್‌ಗೂ ವಾಟ್ಸ್‌ಆ್ಯಪ್ ಅಥವಾ ಎಸ್‌ಎಂಎಸ್‌ನಲ್ಲಿ ಸೈಬರ್ ಕಳ್ಳರು ಲಿಂಕ್ ಕಳುಹಿಸುವ ಸಾಧ್ಯತೆ ಇದೆ. ಬಾಲರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ವಿವಿಐಪಿ ಪಾಸ್ ಪಡೆದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡುವಂತೆ ಲಿಂಕ್ ಕಳುಹಿಸಲಿದ್ದಾರೆ.

    ಅದರ ಮೇಲೆ ಯಾಮಾರಿ ಕ್ಲಿಕ್ ಮಾಡಿದರೇ ಸಾಕು..ಅಮಾಯಕರ ಮೊಬೈಲ್ ನಂಬರ್, ಬ್ಯಾಂಕ್ ವಿವರ ಪಡೆದು ಖಾತೆಗೆ ಕನ್ನ ಹಾಕಲಿದ್ದಾರೆ. ಆದರಿಂದ ಯಾವುದೇ ಅಪರಿಚಿತ ಲಿಂಕ್ ಬಂದರೇ ಅಂತಹ ಲಿಂಕ್ ಮೇಲೆ ಕ್ಲಿಕ್ ಮಾಡಿ ಸೈಬರ್ ವಂಚನೆಗೆ ಒಳಗಾಗಬೇಡಿ ಎಂದು ರಾಜ್ಯ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts