ವಿಜಯನಗರ: ಅಂತರ್ಜಾತಿಯ ಯುವಕ-ಯುವತಿ ಪರಸ್ಪರ ಪ್ರೀತಿಸಿ ಊರು ಬಿಟ್ಟ ಹಿನ್ನೆಲೆಯಲ್ಲಿ ಯುವತಿ ಮನೆಯವರು ಹುಡುಗನ ಮೇಲೆ ದಾಳಿ ಮಾಡಿರವುದಲ್ಲದೆ, ಸಂಬಂಧಿಕರ ಐದು ಮನೆಯನ್ನು ಹಾಳುಗೆಡವಿದ್ದಾರೆ.
ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಕನ್ನನಾಯಕನಹಳ್ಳಿಯಲ್ಲಿ (ಅಗ್ರಹಾರ) ಘಟನೆ ನಡೆದಿದೆ. ದುರ್ಗೇಶ್ ಮತ್ತು ಕವಿತಾ ಪ್ರೀತಿಸಿ ಊರು ಬಿಟ್ಟಿದ್ದಾರೆ. ಇದರಿಂದ ಕುಪಿತಗೊಂಡ ಹುಡುಗಿಯ ಕಡೆಯವರು ಹುಡುಗನ ಮನೆಯನ್ನು ಧ್ವಂಸ ಮಾಡಿದ್ದಾರೆ.
ಮನೆಯಲ್ಲಿನ ಟಿವಿ ಒಡೆದು, ಹಣ, ಚಿನ್ನ, ಅಕ್ಕಿ ಬೆಳೆ, ಬಟ್ಟೆಯನ್ನು ಕದ್ದೊಯ್ದಿದ್ದಾರೆ. ಆಹಾರ ಪದಾರ್ಥಗಳ ಜತೆ, ಪಾತ್ರೆ ಪಗಡೆಗಳನ್ನು ಬಿಟ್ಟಿಲ್ಲ. ಇದರೊಂದಿಗೆ ದುರ್ಗೇಶ್ ಸಂಬಂಧಿಕರಿಗೆ ಸೇರಿದ ಎರಡು ಎಮ್ಮೆ ಮತ್ತು ಎರಡು ಟಗರುಗಳನ್ನು ಕಳ್ಳತನ ಮಾಡಿದ್ದಾರೆ. ದುರ್ಗೇಶ್ ಅಣ್ಣನ ಮನೆ ಮತ್ತು ಅಕ್ಕನ ಮನೆಯ ಎರಡು ಹೊಸ ಪಲ್ಸರ್ ಬೈಕ್ಗಳನ್ನು ಧ್ವಂಸ ಮಾಡಿದ್ದಾರೆ.
ಹಲ್ಲೆ ನಡೆಸಿ ಮನೆಗೆ ಹಾನಿ ಮಾಡಿದ್ದಲ್ಲದೆ, ಹುಡುಗನ ಸಂಧಿಕರಿಗೆ ಊರಿಗೆ ಕಾಲಿಡದಂತೆ ಬೆದರಿಕೆ ಹಾಕಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹರಪನಳ್ಳಿ ಪೊಲೀಸ್ ಠಾಣೆಯಲ್ಲಿ 13 ಜನರ ಮೇಲೆ ಎಫ್ಐಆರ್ ದಾಖಲಾಗಿದೆ. ಆದರೆ, ಇದುವರೆಗೂ ಪೊಲೀಸರು ಒಬ್ಬರನ್ನು ಬಂಧಿಸಿಲ್ಲ.
ಭರ್ಜರಿ ಬಾಡೂಟ
ಯುವತಿ ಮನೆಯವರು ಹುಡುಗನ ಮನೆಯ ಟಗರುಗಳನ್ನು ಕದ್ದೊಯ್ದು ಬಾಡೂಟ ಮಾಡಿ ತಿಂದಿದ್ದಾರೆ. ಯುವತಿ ಸಂಬಂಧಿಕರು ಇಡೀ ಮನೆಯನ್ನೇ ರಣರಂಗ ಮಾಡಿದ್ದಿ, ಯುವಕನ ಮನೆಯವರು ನಿಸ್ಸಾಹಯಕ ಸ್ಥಿತಿಯಲ್ಲಿದ್ದಾರೆ. (ದಿಗ್ವಿಜಯ ನ್ಯೂಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ
ಉಗ್ರರ ದಾಳಿಗೂ ಜಗ್ಗದ, ಚೀನಾದ ದಾಖಲೆ ಮುರಿಯಲು ಸಜ್ಜಾಗುತಿದೆ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ
ತನ್ನ ಮನೆಯ ಬಾಗಿಲ ಬಳಿಯ ಕಾರ್ಪೆಟ್ ಅಡಿಯಲ್ಲಿತ್ತು ರಹಸ್ಯ ಕೋಣೆ: ಒಳಹೊಕ್ಕ ಮಹಿಳೆಗೆ ಕಾದಿತ್ತು ಶಾಕ್!
ನಡುರಾತ್ರಿ ಕಾಂಗ್ರೆಸ್ ಶಾಸಕನ ಸೋದರಳಿಯನ ಮೇಲೆ ಗುಂಡಿನ ದಾಳಿ: ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿಯೇ ಕೊನೆಯುಸಿರು