More

    ಪತ್ನಿಯ ಶೀಲ ಶಂಕಿಸಿ, ಆಕೆಯ ಹುಟ್ಟುಹಬ್ಬದ ದಿನ ನಡು ಬೀದಿಯಲ್ಲೇ ಅಮಾನವೀಯವಾಗಿ ಹಲ್ಲೆ ಮಾಡಿದ ಪತಿ

    ಬೆಂಗಳೂರು: ಅಂದು ಹೊಸ ವರ್ಷದ ಮೊದಲ ದಿನ. ಅಂದೇ ಆಕೆಯ ಹುಟ್ಟುಹಬ್ಬ. ಹುಟ್ಟು ಹಬ್ಬದ ಖುಷಿಯಲ್ಲಿದ್ದ ಆಕೆಯ ಮೇಲೆ ಗಂಡನೇ ಮಾರಣಾಂತಿಕವಾಗಿ ಥಳಿಸಿದ್ದಾನೆ.

    ಪತ್ನಿಯ ಶೀಲ ಶಂಕಿಸಿ ನಡುರಸ್ತೆಯಲ್ಲೇ ಬೆನ್ನಟ್ಟಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಬೆಂಗಳೂರಿನ ಜ್ಞಾನಭಾರತಿ ಕ್ಯಾಂಪಸ್ ಬಳಿಯ ಮಾರುತಿನಗರದಲ್ಲಿ ಘಟನೆ ನಡೆದಿದೆ.

    ಅಲ್ತಾಫ್ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಪತಿ. ಜನವರಿ 1ರಂದು ಘಟನೆ ನಡೆಸಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ಹುಟ್ಟುಹಬ್ಬ ಆಚರಣೆಗೆಂದು ತಾಯಿ ಜೊತೆ ಹೋಗುತ್ತಿದ್ದ ಆಕೆಯನ್ನು ಪತಿ ಅಲ್ತಾಫ್​ ನಡು ರಸ್ತೆಯಲ್ಲೆ ಹಲ್ಲೆ ಮಾಡಿದ್ದಾನೆ. ಬೈಕ್​ನಿಂದ ಗುದ್ದಿ, ಆಕೆಯ ಮೇಲೆ ಚಾಕುವಿನಿಂದ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ತಲೆ, ಎದೆ, ಕೈ, ತೊಡೆ, ಹೊಟ್ಟೆ ಭಾಗಕ್ಕೆ ಇರಿದು, ತಲೆ ಮರೆಸಿಕೊಂಡಿದ್ದಾನೆ.

    ಪತಿ ಅಲ್ತಾಫ್​ನಿಂದ ಆಕೆಯನ್ನು ರಕ್ಷಿಸಿ, ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

    ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಸದ್ಯ ಬಿಡುಗಡೆಗೊಂಡಿದ್ದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ದೇಹದ ಮೇಲಿನ ಗಾಯಗಳು ಇನ್ನು ಹಾಗೇ ಇವೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts