ಪ್ರಯಾಗ್ರಾಜ್: ಉತ್ತರಪ್ರದೇಶದಲ್ಲಿ ಗುಂಡಿನ ಮೊರೆತ ಕೇಳಿಸಿದ್ದು, ಇನ್ನಿಬ್ಬರು ಪಾತಕಿಗಳು ಬಲಿಯಾಗಿದ್ದಾರೆ. ಪಾತಕಿ ಅತೀಖ್ ಅಹಮದ್ನ ಪುತ್ರ ಅಸದ್ನನ್ನು ಮೊನ್ನೆ ಎನ್ಕೌಂಟರ್ ಮೂಲಕ ಹೊಡೆದುರುಳಿಸಲಾಗಿದ್ದು, ಇಂದು ಅತೀಕ್ ಜತೆಗೆ ಆತನ ಸಹೋದರ ಅಶ್ರಫ್ ಅಹಮದ್ ಕೂಡ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.
ಅತೀಖ್ ಅಹಮದ್ 2005ರಲ್ಲಿ ನಡೆದಿದ್ದ ಬಿಎಸ್ಪಿ ಶಾಸಕ ರಾಜು ಪಾಲ್ ಹತ್ಯೆ ಹಾಗೂ ಇದೇ ಫೆಬ್ರವರಿಯಲ್ಲಿ ನಡೆದ ಉಮೇಶ್ ಪಾಲ್ ಕೊಲೆಯನ್ನೂ ಆರೋಪಿಯಾಗಿದ್ದ. ಇಂದು ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಕೊಂಡೊಯ್ದಿದ್ದಾಗ ಪ್ರಯಾಗ್ರಾಜ್ನಲ್ಲಿ ಶೂಟ್ ಮಾಡಿ ಸಾಯಿಸಲಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಾಗಿದೆ. ಅವರಿಬ್ಬರು ಪೊಲೀಸರ ಜೊತೆಗಿದ್ದು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುತ್ತಿರುವಾಗಲೇ ಗುಂಡಿನ ದಾಳಿ ಮಾಡಲಾಗಿದೆ. ಈ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು, ವೈರಲ್ ಆಗಲಾರಂಭಿಸಿದೆ.
ಇದನ್ನೂ ಓದಿ: ಮಾಡಾಳ್ ವಿರೂಪಾಕ್ಷಪ್ಪ ಜೈಲಿನಿಂದ ಬಿಡುಗಡೆ; ಭ್ರಷ್ಟಾಚಾರ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿದ್ದ ಆರೋಪಿ
ಅಸದ್ನನ್ನು ಏ. 13ರಂದು ಎನ್ಕೌಂಟರ್ ಮಾಡಲಾಗಿದ್ದು, ಆತನೊಂದಿಗೆ ಗುಲಾಮ್ ಎಂಬಾತನನ್ನೂ ಶೂಟ್ ಮಾಡಿ ಹೊಡೆದುರುಳಿಸಲಾಗಿತ್ತು. ಇಬ್ಬರೂ ಉಮೇಶ್ ಪಾಲ್ ಮರ್ಡರ್ ಕೇಸ್ನಲ್ಲಿ ವಾಂಟೆಡ್ ಲಿಸ್ಟ್ನಲ್ಲಿದ್ದರು. ಇವರ ತಲೆಗೆ ಐದು ಲಕ್ಷ ರೂ. ಇನಾಮು ಕೂಡ ಘೋಷಿಸಲಾಗಿತ್ತು.
ಭಾಜಪದ ಮತ್ತೊಂದು ವಿಕೆಟ್ ಪತನ, ಶೆಟ್ಟರ್ ಬಿಜೆಪಿಗೆ ಗುಡ್ಬೈ; ನಾಳೆಯೇ ರಾಜೀನಾಮೆ