More

    ಅಯೋಧ್ಯೆಗೆ ‘ಆಸ್ತಾ’ ಎಕ್ಸ್​ಪ್ರೆಸ್ ಸ್ಪೇಷಲ್ ರೈಲು

    ಹುಬ್ಬಳ್ಳಿ : ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಂತರ ರಾಜ್ಯದ ವಿವಿಧ ಭಾಗಗಳಿಂದ ಅಯೋಧ್ಯೆಗೆ ತೆರಳಲು ಭಕ್ತರ ಬೇಡಿಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆ ವಲಯವು ಪ್ರಮುಖ ರೈಲು ನಿಲ್ದಾಣಗಳಿಂದ ಆಸ್ತಾ (ಭಕ್ತಿ) ಎಕ್ಸ್​ಪ್ರೆಸ್ ಸ್ಪೇಷಲ್ ರೈಲುಗಳ ಸಂಚಾರವನ್ನು ಜ. 31 ರಿಂದ ಪ್ರಾರಂಭಿಸುತ್ತಿದೆ.

    ಸರ್ ಎಂ. ವಿಶ್ವೇಶ್ವರಯ್ಯ ಟರ್ವಿುನಲ್ ಬೆಂಗಳೂರು (ಎಸ್​ಎಂವಿಬಿ)- ಅಯೋಧ್ಯಾಧಾಮ (ಎವೈ), ಮೈಸೂರು-ಎವೈ, ತುಮಕೂರು- ಎವೈ, ಚಿತ್ರದುರ್ಗ-ಎವೈ, ವಾಸ್ಕೊ- ದರ್ಶನ್ನಗರ, ಮೈಸೂರು -ಎವೈ, ಬೆಳಗಾವಿ- ಎವೈ ರೈಲುಗಳು ಅಯೋಧ್ಯೆಗೆ ಸಂಚರಿಸಲಿವೆ.

    ಜ. 31, ಫೆ. 14 ಮತ್ತು 28ರ ಬುಧವಾರ ಬೆಳಗಿನಜಾವ 4 ಗಂಟೆಗೆ ಎಸ್​ಎಂವಿಬಿಯಿಂದ ಹೊರಡುವ ರೈಲು, ಶುಕ್ರವಾರ ಮಧ್ಯಾಹ್ನ 12.55ಕ್ಕೆ ಅಯೋಧ್ಯೆ ತಲುಪುತ್ತದೆ. ಮರಳಿ ಫೆ. 3, 17 ಮತ್ತು 2ರ ಶನಿವಾರ ರಾತ್ರಿ 9.20ಕ್ಕೆ ಅಯೋಧ್ಯೆಯಿಂದ ಹೊರಡುವ ಈ ರೈಲು, ಮಂಗಳವಾರ ಬೆಳಗಿನಜಾವ 4 ಗಂಟೆಗೆ ಎಸ್​ಎಂವಿಬಿ ನಿಲ್ದಾಣ ತಲುಪುತ್ತದೆ.

    ಮೈಸೂರು- ಅಯೋಧ್ಯಾಧಾಮ ರೈಲು ಫೆ. 4 ಮತ್ತು 18ರ ಭಾನುವಾರ ಮಧ್ಯರಾತ್ರಿ 12.15ಕ್ಕೆ ಮೈಸೂರಿನಿಂದ ಹೊರಟು, ಮಂಗಳವಾರ ಮಧ್ಯಾಹ್ನ 12.55ಕ್ಕೆ ಅಯೋಧ್ಯೆ ತಲುಪುವುದು. ಫೆ. 7 ಮತ್ತು 21ರ ಬುಧವಾರ ರಾತ್ರಿ 9.20ಕ್ಕೆ ಅಯೋಧ್ಯಾ ಧಾಮದಿಂದ ಹೊರಡುವ ಈ ರೈಲು, ಶನಿವಾರ ಬೆಳಗ್ಗೆ 7 ಗಂಟೆಗೆ ಮೈಸೂರು ತಲುಪುವುದು.

    ತುಮಕೂರು-ಅಯೋಧ್ಯಾ ಧಾಮ ರೈಲು ಫೆ. 7 ಮತ್ತು 21 ರ ಬುಧವಾರ ಬೆಳಗಿನಜಾವ 5.20ಕ್ಕೆ ಹೊರಟು, ಶುಕ್ರವಾರ ರಾತ್ರಿ 12.55ಕ್ಕೆ ಅಯೋಧ್ಯೆ ತಲುಪಲಿದೆ. ಅಯೋಧ್ಯಾ ಧಾಮ- ತುಮಕೂರು ರೈಲು ಫೆ. 10 ಮತ್ತು 24ರ ಶನಿವಾರದಂದು ರಾತ್ರಿ 9.20ಕ್ಕೆ ಹೊರಟು, ಮಂಗಳವಾರ ಮಧ್ಯರಾತ್ರಿ 1.40ಕ್ಕೆ ತುಮಕೂರು ತಲುಪುವುದು.

    ಫೆ. 11 ಮತ್ತು 25ರ ಭಾನುವಾರ ಬೆಳಗ್ಗೆ 10.20ಕ್ಕೆ ಹೊರಡುವ ಚಿತ್ರದುರ್ಗ- ಅಯೋಧ್ಯಾ ಧಾಮ ರೈಲು, ಮಂಗಳವಾರ ಮಧ್ಯರಾತ್ರಿ 12.55ಕ್ಕೆ ಅಯೋಧ್ಯೆ ತಲುಪುವುದು. ಫೆ. 14 ಮತ್ತು 28ರ ಬುಧವಾರ ರಾತ್ರಿ 9.20ಕ್ಕೆ ಅಯೋಧ್ಯೆಯಿಂದ ಹೊರಡುವ ರೈಲು, ಶುಕ್ರವಾರ ರಾತ್ರಿ 9.20ಕ್ಕೆ ಚಿತ್ರದುರ್ಗ ತಲುಪುವುದು.

    ಫೆ. 12 ಮತ್ತು 26ರ ಸೋಮವಾರ ರಾತ್ರಿ 10.10ಕ್ಕೆ ಹೊರಡುವ ವಾಸ್ಕೊ- ದರ್ಶನ್ನಗರ ರೈಲು, ಬುಧವಾರ ರಾತ್ರಿ 9.35ಕ್ಕೆ ದರ್ಶನ್ನಗರ ತಲುಪಲಿದೆ. ಫೆ. 16 ಮತ್ತು ಮಾ. 1ರ ಶುಕ್ರವಾರ ಬೆಳಗ್ಗೆ 8 ಗಂಟೆಗೆ ದರ್ಶನ್ನಗರದಿಂದ ಹೊರಡುವ ರೈಲು, ಭಾನುವಾರ ಮಧ್ಯರಾತ್ರಿ 12 ಗಂಟೆಗೆ ವಾಸ್ಕೊ ತಲುಪಲಿದೆ.

    ಫೆ. 17ರ ಶನಿವಾರ ಬೆಳಗಿನಜಾವ 3 ಗಂಟೆಗೆ ಹೊರಡುವ ಮೈಸೂರು-ಅಯೋಧ್ಯಾಧಾಮ ರೈಲು, ಸೋಮವಾರ ಮಧ್ಯರಾತ್ರಿ 12.55ಕ್ಕೆ ಅಯೋಧ್ಯೆ ತಲುಪುವುದು. ಫೆ. 20ರ ಮಂಗಳವಾರ ರಾತ್ರಿ 9.20ಕ್ಕೆ ಹೊರಡುವ ಅಯೋಧ್ಯಾಧಾಮ-ಮೈಸೂರು ರೈಲು, ಬೆಳಗಿನಜಾವ 3.20ಕ್ಕೆ ಮೈಸೂರು ತಲುಪುವುದು.

    ಫೆ. 17ರ ಶನಿವಾರ ಬೆಳಗ್ಗೆ 10.35ಕ್ಕೆ ಹೊರಡುವ ಬೆಳಗಾವಿ-ಅಯೋಧ್ಯಾಧಾಮ ರೈಲು, ಸೋಮವಾರ ಬೆಳಗ್ಗೆ 11.50ಕ್ಕೆ ಅಯೋಧ್ಯೆ ತಲುಪಲಿದೆ. ಫೆ. 20ರ ಮಂಗಳವಾರ ರಾತ್ರಿ 10 ಗಂಟೆಗೆ ಅಯೋಧ್ಯೆಯಿಂದ ಹೊರಡುವ ರೈಲು, ಶನಿವಾರ ಮಧ್ಯಾಹ್ನ 4.45ಕ್ಕೆ ಬೆಳಗಾವಿ ತಲುಪಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts