ಕುಷ್ಟಗಿ: ಕೃಷ್ಣಾ ಬಿ ಸ್ಕೀಂ ಯೋಜನೆ ತ್ವರಿತ ಅನುಷ್ಠಾನಕ್ಕೆ ಆಗ್ರಹಿಸಿ ಪಟ್ಟಣದ ತಹಸಿಲ್ ಕಚೇರಿಯಲ್ಲಿ ವಿವಿಧ ರೈತಪರ ಸಂಘಟನೆಗಳು ನಡೆಸುತ್ತಿದ್ದ ಧರಣಿಯನ್ನು, ಗುರುವಾರ ಅಂತ್ಯಗೊಳಿಸಿವೆ. ಧರಣಿ ಸ್ಥಳಕ್ಕೆ ಭೇಟಿ ನೀಡಿದ ಸಹಾಯಕ ಆಯುಕ್ತೆ ಸಿ.ಡಿ.ಗೀತಾ, ರೈತ ಮಖಂಡರೊಂದಿಗೆ ಚರ್ಚಿಸಿ, ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರಿಂದ ಈ ಕ್ರಮ ಕೈಗೊಂಡಿವೆ.
ಯೋಜನೆ ಅನುಷ್ಠಾನಕ್ಕೆ 1800ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ತ್ವರಿತಗತಿಯಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದು ಎಸಿ ಗೀತಾ ತಿಳಿಸದರು. ಸದ್ಯ ಧರಣಿ ಹಿಂಪಡೆದ ರೈತರು, ಯೋಜನೆ ಅನುಷ್ಠಾನ ವಿಳಂಬವಾದಲ್ಲಿ ಏಪ್ರಿಲ್ನಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಚಳಗೇರಿಯ ಶ್ರೀ ವೀರಸಂಗಮೇಶ್ವರ ಶಿವಾಚಾರ್ಯ, ತಹಸೀಲ್ದಾರ್ ಎಂ.ಸಿದ್ದೇಶ, ರೈತ ಸಂಘದ ಜಿಲ್ಲಾ ಅಧ್ಯಕ್ಷ ನಜೀರ್ಸಾಬ್ ಮೂಲಿಮನಿ, ಪ್ರಾಂತ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಆರ್.ಕೆ.ದೇಸಾಯಿ, ಸಂಘಟಕ ಅಣ್ಣಪ್ಪಗೌಡ ದೇಸಾಯಿ ಇತರರು ಇದ್ದರು.