ಮಂಗಳೂರು: ತನ್ನ ಹೆಸರಿಗೆ ಬಂದಿದ್ದ ರಿಜಿಸ್ಟರ್ ಕಾಗದ ನೀಡಲೆಂದು ಬಂದ ಅಂಚೆ ಕಚೇರಿಯ ಪೋಸ್ಟ್ಮ್ಯಾನ್ ಮೇಲೆಯೇ ಯುವಕನೊಬ್ಬ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ.
ನಗರದ ಅಶೋಕನಗರ ಅಂಚೆ ಕಚೇರಿಯ ಪೋಸ್ಟ್ಮ್ಯಾನ್, ಕೋಟೆಕಾರ್ ನಿವಾಸಿ ದಿನೇಶ್ (49) ಗಾಯೊಂಡಿದ್ದಾರೆ. ಎಂದಿನಂತೆ ಕಚೇರಿಯಿಂದ ಕಾಗದ ಬಟವಾಡೆ ಮಾಡಲು ಮಠದಕಣಿಗೆ ದಿನೇಶ್ ಇಂದು ತೆರಳಿದ್ದರು. ಈ ವೇಳೆ ಮಠದಕಣಿ ನಿವಾಸಿ ಮನೀಶ್(21) ಎಂಬಾತ ದಿನೇಶ್ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದು, ಅವರ ಬೈಕ್ ಅನ್ನೂ ಹಾನಿ ಮಾಡಿದ್ದಾನೆ. ಇದನ್ನೂ ಓದಿರಿ ಕಂಡವರ ಹೆಂಡ್ತಿ ಜತೆ ಅವಿವಾಹಿತನ ಲವ್ವಿ ಡವ್ವಿ… ಆಕೆಯ ಮನೆಯವರಿಗೆ ತಾನೇ ಫೋಟೋ ಕಳಿಸಿ ಗುಟ್ಟನ್ನು ರಟ್ಟು ಮಾಡಿದ!
ಮನೀಶ್ಗೆ ಬಂದಿದ್ದ ರಿಜಿಸ್ಟ್ರಾರ್ ಪತ್ರ ಕೊಡಲೆಂದು ದಿನೇಶ್ ತೆರಳಿದ್ದರು. ಈ ವೇಳೆ ತಡವಾಗಿ ಪತ್ರ ಕೊಡುತ್ತಿದ್ದೀರಿ ಎಂದು ಆರೋಪಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಮಾರಕಾಸ್ತ್ರದಿಂದ ಏಕಾಏಕಿ ಹಲ್ಲೆ ಮಾಡಿದ್ದಾನೆ. ಈತನಿಂದ ತಪ್ಪಿಸಿಕೊಳ್ಳಲು ಪೋಸ್ಟ್ಮ್ಯಾನ್ ಓಡಿ ಹೋಗಿದ್ದು, ಸ್ಥಳದಲ್ಲೇ ಇದ್ದ ಅವರ ಬೈಕ್ ಅನ್ನು ಮನೀಶ್ ಪುಡಿಗಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿರಿ ಸ್ನಾನ ಮಾಡಲು ಹೋದ ಪತ್ನಿ ಜತೆಯಲ್ಲೇ ಪತಿ ಸಾವು!