More

    ಐಶ್ವರ್ಯ ರೈ ಬಚ್ಚನ್​ ಮತ್ತು ಪುತ್ರಿ ಆರಾಧ್ಯಗೂ ಕರೊನಾ ಸೋಂಕು

    ಮುಂಬೈ: ಬಾಲಿವುಡ್​ನ ದಿಗ್ಗಜ ನಟ ಅಮಿತಾಭ್​ ಬಚ್ಚನ್​ ಮತ್ತು ಜಯಾ ಬಾಧುರಿ ಸೊಸೆ ಐಶ್ವರ್ಯ ರೈ ಬಚ್ಚನ್​ ಹಾಗೂ ಮೊಮ್ಮಗಳು ಆರಾಧ್ಯ ಅವರಿಗೂ ಕರೊನಾ ಸೋಂಕು ತಗುಲಿರುವುದು ಖಚಿತಪಟ್ಟಿದೆ.

    ಆದರೆ, ಜಯಾ ಬಚ್ಚನ್​, ಶ್ವೇತಾ ಬಚ್ಚನ್ ನಂದಾ, ಆಗಸ್ತ್ಯ ಬಚ್ಚನ್​ ಮತ್ತು ನವ್ಯ ನವೇಲಿ ನಂದಾ ಅವರ ಕರೋನಾ ಪರೀಕ್ಷೆಯ ಪರೀಕ್ಷೆ ನೆಗೆಟಿವ್​ ಆಗಿ ಬಂದಿರುವುದಾಗಿ ಹೇಳಲಾಗಿದೆ.

    ಬಿಗ್​ಬಿ ಹಾಗೂ ಅವರ ಪುತ್ರ ಅಭಿಷೇಕ್​ ಬಚ್ಚನ್​ ಅವರಿಗೆ ಕರೋನಾ ಸೋಂಕು ತಗುಲಿರುವುದು ಶನಿವಾರ ರಾತ್ರಿ ಖಚಿತಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಅವರಿಬ್ಬರೂ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

    ಕರೊನಾ ಸೋಂಕಿನ ಸೌಮ್ಯಲಕ್ಷಣಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿರುವುದಾಗಿಯೂ, ಅಭಿಮಾನಿಗಳು ಅನಗತ್ಯವಾಗಿ ಆತಂಕಕ್ಕೆ ಒಳಗಾಬಾರದು ಎಂದು ಅಮಿತಾಭ್​ ಮನವಿ ಮಾಡಿಕೊಂಡಿದ್ದರು. ದೇಶಾದ್ಯಂತ ಇರುವ ಕೋಟ್ಯಂತರ ಅಭಿಮಾನಿಗಳು ಬಿಗ್​ಬಿ ಮತ್ತು ಅಭಿಷೇಕ್​ ಅವರ ತ್ವರಿತ ಚೇತರಿಕೆಗಾಗಿ ಹಾರೈಸಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹರಿಬಿಡುತ್ತಿದ್ದಾರೆ.

    ಇದನ್ನೂ ಓದಿ: ನಾನಾವತಿ ಆಸ್ಪತ್ರೆಯಿಂದ ತಮ್ಮ ಚಿತ್ರ ಹಂಚಿಕೊಂಡ ಅಮಿತಾಭ್​ ಬಚ್ಚನ್​

    ಅಮಿತಾಭ್​ರ ಬಂಗಲೆ ಕಂಟೇನ್ಮೆಂಟ್​ ವಲಯ: ಅಮಿತಾಭ್​ ಬಚ್ಚನ್ ಅವರ ಮನೆಯನ್ನು ಕಂಟೇನ್ಮೆಂಟ್​ ವಲಯ ಎಂದು ಘೋಷಿಸಿರುವ ಬೃಹನ್ಮುಂಬೈ ಮಹಾನಗರಪಾಲಿಕೆ ಅಧಿಕಾರಿಗಳು ಭಾರಿ ಸ್ಯಾನಿಟೈಸಿಂಗ್​ ಕ್ರಮ ಕೈಗೊಂಡಿದ್ದಾರೆ. ಅತಿ ವಿಶಾಲವಾದ ಕಾಂಪೌಂಡ್​ನ ಸುತ್ತ ಹಾಗೂ ಬಿಗ್​ಬಿ ಮನೆಯ ಹೊರಗೋಡೆಗಳ ಮೇಲೆ ವೈರಾಣುನಾಶಕವನ್ನು ಸಿಂಪಡಿಸಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿರುವ ಮೇಯರ್​ ಕಿಶೋರಿ ಪೇಡ್​ನೇಕರ್​, ಭಾನುವಾರ ಬೆಳಗ್ಗೆ ಬಿಎಂಸಿ ವತಿಯಿಂದ ಅಮಿತಾಭ್​ರ ಮನೆಯ ಸುತ್ತಮುತ್ತ ಸ್ಯಾನಿಟೈಸಿಂಗ್​ ಮಾಡಲಾಯಿತು. ಬಳಿಕ ಅದನ್ನು ಕಂಟೇನ್ಮೆಂಟ್​ ವಲಯ ಎಂದು ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

    ಮನೆಗೆ ಯಾರೊಬ್ಬರೂ ಪ್ರವೇಶಿಸುವಂತಿಲ್ಲ. ಯಾರೊಬ್ಬರೂ ಹೊರಬರುವಂತಿಲ್ಲ. ಮುಂಬೈ ಪೊಲೀಸರು ಮನೆಗೆ ಬ್ಯಾರಿಕೇಡ್​ ಅಳವಡಿಸಿದ್ದಾರೆ. ಆ ಮನೆಯಲ್ಲಿದ್ದ ಎಲ್ಲರನ್ನೂ 14 ದಿನಗಳ ಕಡ್ಡಾಯ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಗೋಗ್ರಾದಿಂದ ಚೀನಾ ಸೈನಿಕರು ಹಿಂದೆ ಸರಿದಿದ್ದೇ ಸುಳ್ಳು ಎಂದ ನಿವೃತ್ತ ಕರ್ನಲ್​: ರಾಹುಲ್​ ಗಾಂಧಿ ಕೆಂಡಾಮಂಡಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts