More

    ಅಶೋಕ್​ ಗೆಹ್ಲೋಟ್​ ಆಪ್ತರ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ

    ಜೈಪುರ/ನವದೆಹಲಿ: ರಾಜಸ್ಥಾನದಲ್ಲಿ ರಾಜಕೀಯ ಅಸ್ಥಿರತೆ ಮುಂದುವರಿದಿರುವಂತೆ ಕಾಂಗ್ರೆಸ್​ ಮುಖಂಡರ ಸಂಕಷ್ಟಗಳು ಒಂದೊಂದಾಗಿ ಹೆಚ್ಚಾಗುತ್ತಿದೆ. ದೆಹಲಿ ಮತ್ತು ರಾಜಸ್ಥಾನದಲ್ಲಿರುವ ಕಾಂಗ್ರೆಸ್​ ಮುಖಂಡರ ಮನೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದು, ವಿದೇಶಿ ವ್ಯವಹಾರಗಳ ಕುರಿತು ತನಿಖೆ ಆರಂಭಿಸಿದ್ದಾರೆ.

    ಅಂದಾಜು 200ಕ್ಕೂ ಹೆಚ್ಚು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​ ಆವರ ಆಪ್ತರೊಬ್ಬರ ಮನೆಯ ಮೇಲೆ ಸೋಮವಾರ ಬೆಳಗ್ಗೆ ದಾಳಿ ಮಾಡಿದ್ದಾರೆ. ಧರ್ಮೇಂದರ್​ ರಾಥೋಡ್​ ಎಂಬುವರ ಮನೆ ಮೇಲೆ ಮುಗಿಬಿದ್ದಿರುವ ಅಧಿಕಾರಿಗಳು ದಾಖಲೆಗಳನ್ನು ತಡಕಾಡುತ್ತಿದ್ದಾರೆ.

    ಆಭರಣದ ಮಳಿಗೆ ಹೊಂದಿರುವ ರಾಜೀವ್​ ಅರೋರಾ ಎಂಬುವರ ಮನೆ ಮತ್ತು ಅಂಗಡಿ ಸೇರಿ ದೆಹಲಿ ಹಾಗೂ ರಾಜಸ್ಥಾನದಲ್ಲಿರುವ ಅವರಿಗೆ ಸಂಬಂಧಿಸಿದ 12ಕ್ಕೂ ಹೆಚ್ಚು ಸ್ಥಳಗಳಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.

    ಹಾಸ್ಯನಟಿ ವಿರುದ್ಧ ಅವಾಚ್ಯವಾಗಿ ನಿಂದಿಸಿ, ರೇಪ್​ ಮಾಡುವ ಬೆದರಿಕೆ ಹಾಕಿದ್ದವ ಸಿಕ್ಕಿಬಿದ್ದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts