ನವದೆಹಲಿ: ಲಾಕ್ಡೌನ್ನಿಂದ ಪ್ರಕೃತಿಗಾದಷ್ಟು ಉಪಕಾರ ಇನ್ನಾರಿಗೂ ಆಗಿಲ್ಲವೇನೋ..? ವಾಯು ಗುಣಮಟ್ಟ 20 ವರ್ಷಗಳಷ್ಟು ಹಿಂದಿನಷ್ಟು ಚೆನ್ನಾಗಿದೆ. ಗಂಗಾನದಿ ನೀರು ಶುಭ್ರವಾಗಿದೆ. ಕಾವೇರಿ, ಕಪಿಲೆಯರು ಕೂಡ ನಳನಳಿಸುತ್ತಿದ್ದಾರೆ. ಅಷ್ಟೇ ಏಕೆ ಬೆಂಗಳೂರಿನ ವೃಷಭಾವತಿ ನದಿ ಕೂಡ ಸ್ವಚ್ಛಗೊಂಡಿದೆ…!
ವಾತಾವರಣ ತಿಳಿಯಾಗಿರುವುದರಿಂದ ಪಂಜಾಬ್ನ ಜಲಂಧರ್ನಿಂದ 200 ಕಿ.ಮೀ. ದೂರದಲ್ಲಿರುವ ಹಿಮಾಲಯ ಪರ್ವತಶ್ರೇಣಿಯನ್ನು ನೋಡಬಹುದು. ಸಿಲಿಗುರಿಯಿಂದ ಕಾಂಚನ್ಜುಂಗಾ ಪರ್ವತ ಕಾಣುತ್ತದೆ. ಇವುಗಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿವೆ.
ಇದನ್ನೂ ಓದಿ; ತಂಬಾಕಿನಲ್ಲಿದೆ ಕರೊನಾ ಗುಣಪಡಿಸುವ ಶಕ್ತಿ, ಸಿಗರೇಟ್ ಕಂಪನಿ ತಯಾರಿಸಿದೆ ಲಸಿಕೆ…!
ಇದೀಗ ಅಂಥದ್ದೇ ಮತ್ತೊಂದು ವಿದ್ಯಮಾನ ಜರುಗಿದೆ. ಕಾಠ್ಮಂಡು ಕಣಿವೆಯಿಂದ ಜಗತ್ತಿನ ಅತ್ಯಂತ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಕಣ್ತುಂಬಿಕೊಳ್ಳಬಹುದು….!
ಹಿಮಾಲಯ ಪರ್ವತಶ್ರೇಣಿಯೇ ಅತ್ಯಂತ ಸ್ಪಷ್ಟವಾಗಿ ಕಾಣುತ್ತಿದೆ. ಅದರಲ್ಲೂ ಎವರೆಸ್ಟ್ ಪರ್ವತದ ತುದಿಯನ್ನು ಕೂಡ ಅಷ್ಟೇ ನಿಖರವಾಗಿ ಗುರುತಿಸಬಹುದು. ಹಲವು ವರ್ಷಗಳ ಬಳಿಕ ಇಂಥದ್ದೊಂದು ದೃಶ್ಯ ಗೋಚರವಾಗಿದೆ ಎನ್ನುತ್ತಾರೆ ಕಾಠ್ಮಂಡು ಕಣಿವೆಯ ಜನರು.
ಕಾಠ್ಮಂಡು ಕಣಿವೆಯ ಚೋಬಾರ್ ಪ್ರದೇಶ ಹಿಮಾಲಯ ಪರ್ವತಶ್ರೇಣಿಯಿಂದ ಅಂದಾಜು 200 ಕಿ.ಮೀ ದೂರದಲ್ಲಿದೆ. ಇಲ್ಲಿಂದ ಮೌಂಟ್ ಎವರೆಸ್ಟ್ಅನ್ನು ಬರಿಗಣ್ಣಿನಿಂದ ಸ್ಪಷ್ಟವಾಗಿ ನೋಡಬಹುದು. ಇದರ ಚಿತ್ರಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಇದನ್ನೂ ಓದಿ; ಕೋತಿಗಳ ಮೇಲೆ ಯಶಸ್ವಿಯಾಯ್ತು ಕರೊನಾ ಲಸಿಕೆ…!
ವಾಯುಮಾಲಿನ್ಯ ಕಡಿಮೆಯಿದ್ದ ದಿನಗಳಲ್ಲಿ ಹಿಮಾಲಯವನ್ನು ಬಹುದೂರದಿಂದಲೇ ನೋಡಬಹುದಾಗಿತ್ತು. ಆದರೆ, ವಾಯುಮಾಲಿನ್ಯ ಹೆಚ್ಚುತ್ತ ಸಾಗಿದಂತೆ ಅಂಥ ದೃಶ್ಯಗಳೇ ಮರೆಯಾದವು.
ನೇಪಾಳಿ ಜನರು ಮೌಂಟ್ ಎವರೆಸ್ಟ್ ಅನ್ನು ‘ಸಾಗರ ಮಾತಾ’ ಎಂದೇ ಕರೆಯುತ್ತಾರೆ. ಲಾಕ್ಡೌನ್ನಿಂದಾಗಿ ದೇವತೆ ನಮಗೆ ದರ್ಶನ ನೀಡಿದಂತಾಗಿದೆ. ಮೌಂಟ್ ಎವರೆಸ್ಟ್ ನಮಗೆ ಮತ್ತಷ್ಟು ಹತ್ತಿರವಾಗಿದೆ ಎಂದು ಸ್ಥಳೀಯರು ಸಂತಸ ವ್ಯಕ್ತಪಡಿಸುತ್ತಾರೆ.
ಕೋವಿಡ್ ಕಾಲದಲ್ಲಿ ರೈಲಿನಲ್ಲಿ ಸಂಚರಿಸುವುದೆಂದರೆ ವಿದೇಶ ಪ್ರಯಾಣಕ್ಕಿಂತೇನೂ ಕಡಿಮೆಯಿಲ್ಲ…!