ಮಾಜಿ ಬಿಗ್ಬಾಸ್ ಸ್ಪರ್ಧಿ ಜ್ಯೋತಿಷಿ ಆರ್ಯವರ್ಧನ್ ಗುರೂಜಿ ಈ ಬಾರಿ ಬಿಗ್ಬಾಸ್ ಗೆಲ್ಲುವ ಸ್ಪರ್ಧಿ ಯಾರೆಂದು ಭವಿಷ್ಯ ನುಡಿದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿರುವ ಅನೇಕ ಸ್ಪರ್ಧಿಗಳು ಒಬ್ಬರಿಗೊಬ್ಬರು ಪೈಪೋಟಿ ನೀಡುತ್ತಿದ್ದಾರೆ.
ಕೃಷಿ ಹಿನ್ನೆಲೆಯಲ್ಲಿ ಮನೆಯೊಳಗೆ ಎಂಟ್ರಿ ಕೊಟ್ಟಿರುವ ವರ್ತೂರು ಸಂತೋಷ್, ಈ ಬಾರಿ ಬಿಗ್ ಬಾಸ್ ವಿನ್ನರ್ ಆಗೋದು ಪಕ್ಕಾ ಎಂದು ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಗುರೂಜಿ ಭವಿಷ್ಯ ನುಡಿದಿದ್ದಾರೆ.
ಗುರೂಜಿ ಹೇಳಿರುವ ಹೆಸರು ಜನರಲ್ಲಿ ಆಶ್ಚರ್ಯ ಮೂಡಿಸಿದೆ. ಅಲ್ಲದೇ, ಈ ವ್ಯಕ್ತಿ ಬಿಗ್ ಬಾಸ್ ಗೆಲ್ಲೋದಾ ಎಂದು ಕೆಲವರು ಯೋಚಿಸುತ್ತಿದ್ದಾರೆ. ಜಗಳ ಮಾಡಿ.. ಕಣ್ಣೀರಿಟ್ಟು ಹೈಡ್ರಾಮಾ ಮತ್ತು ಗಾಸಿಪ್ ಮಾಡುವ ಜನರ ಮಧ್ಯೆ ಸೈಲೆಂಟ್ ಆಗಿ ಮನೆಯೊಳಗೆ ಅಗತ್ಯವಿದ್ದಷ್ಟೇ ಮಾತನಾಡುವ ಈ ವ್ಯಕ್ತಿ ಬಿಗ್ ಬಾಸ್ ಗೆಲ್ಲುತ್ತಾರೆ ಎಂದು ಆರ್ಯವರ್ಧನ್ ಗುರೂಜಿ ಹೇಳಿದ್ದಾರೆ.
ವರ್ತೂರು ಸಂತೋಷ್ ಅವರು ಬಿಗ್ಬಾಸ್ ಗೆಲ್ಲುತ್ತಾರಂತೆ. ವರ್ತೂರು ಸಂತೋಷ್ ಅವರದ್ದು ಮೀನಾ ರಾಶಿಯಾಗಿದ್ದು, ಅವರಿಗೆ ಅನುಕೂಲಕರ ವಾತಾವರಣ ಇದೆ ಎಂದು ಆರ್ಯವರ್ಧನ್ ಗುರೂಜಿ ಹೇಳಿದ್ರು. ವರ್ತೂರ್ ಸಂತೋಷ್ ಒಳ್ಳೆಯ ವ್ಯಕ್ತಿ, ರೈತನ ಮಗ ಬಿಗ್ ಬಾಸ್ ಮನೆಯಲ್ಲಿ ಬಹುತೇಕರು ಸಿನಿಮಾ ಹಾಗೂ ಟಿವಿ ಸೀರಿಯಲ್ ಗಳಿಂದ ಜನಪ್ರಿಯತೆ ಹೊಂದಿದವರೇ ಇದ್ದಾರೆ.
ಮನೆಯ ಒಳಗೆ ವರ್ತೂರ್ ಸಂತೋಷ್ ಅವರನ್ನು ಕುಗ್ಗಿಸುವ ಪ್ರಯತ್ನಗಳು ನಡೆಯುತ್ತಿದ್ದು, ಅವರನ್ನು ಜನ ಬೆಂಬಲಿಸಬೇಕು ಎಂದು ಆರ್ಯವರ್ಧನ್ ಮನವಿ ಮಾಡಿದ್ದಾರೆ.
ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನಲ್ಲಿ ಮಾತಾಡಿದ ಆರ್ಯವರ್ಧನ್ ಗುರೂಜಿ ವರ್ತೂರು ಸಂತೋಷ್ ಜನರಿಗೆ ಮನೋರಂಜನೆ ನೀಡುವಂತಹ ವ್ಯಕ್ತಿಯೇ ಆಗಿದ್ದಾರೆ. ಆದರೆ ಅವರ ಮೇಲೆ ಬಂದ ಆರೋಪದಿಂದ ವರ್ತೂರು ಸ್ವಲ್ಪ ವೀಕ್ ಆಗಿದ್ದಾರೆ. ಈ ಹಂತದಲ್ಲಿ ಜನರ ಬೆಂಬಲ ಅವರಿಗೆ ಬೇಕು ಎಂದು ಹೇಳಿದ್ರು.