More

    ಬಿಗ್‌ ಬಾಸ್‌ ವಿನ್ನರ್‌ ಯಾರು ಎಂದು ಆರ್ಯವರ್ಧನ್ ಭವಿಷ್ಯ…ವರ್ತೂರ್​​ ಸಂತೋಷ್​​ ಈ ಬಾರಿಯ ವಿನ್ನರ್​ ಆಗೋದು ಖಚಿತ..!

    ಮಾಜಿ ಬಿಗ್ಬಾಸ್ ಸ್ಪರ್ಧಿ ಜ್ಯೋತಿಷಿ ಆರ್ಯವರ್ಧನ್ ಗುರೂಜಿ ಈ ಬಾರಿ ಬಿಗ್ಬಾಸ್ ಗೆಲ್ಲುವ ಸ್ಪರ್ಧಿ ಯಾರೆಂದು ಭವಿಷ್ಯ ನುಡಿದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿರುವ ಅನೇಕ ಸ್ಪರ್ಧಿಗಳು ಒಬ್ಬರಿಗೊಬ್ಬರು ಪೈಪೋಟಿ ನೀಡುತ್ತಿದ್ದಾರೆ.


    ಕೃಷಿ ಹಿನ್ನೆಲೆಯಲ್ಲಿ ಮನೆಯೊಳಗೆ ಎಂಟ್ರಿ ಕೊಟ್ಟಿರುವ ವರ್ತೂರು ಸಂತೋಷ್, ಈ ಬಾರಿ ಬಿಗ್ ಬಾಸ್ ವಿನ್ನರ್ ಆಗೋದು ಪಕ್ಕಾ ಎಂದು ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಗುರೂಜಿ ಭವಿಷ್ಯ ನುಡಿದಿದ್ದಾರೆ.


    ಗುರೂಜಿ ಹೇಳಿರುವ ಹೆಸರು ಜನರಲ್ಲಿ ಆಶ್ಚರ್ಯ ಮೂಡಿಸಿದೆ. ಅಲ್ಲದೇ, ಈ ವ್ಯಕ್ತಿ ಬಿಗ್‌ ಬಾಸ್‌ ಗೆಲ್ಲೋದಾ ಎಂದು ಕೆಲವರು ಯೋಚಿಸುತ್ತಿದ್ದಾರೆ. ಜಗಳ ಮಾಡಿ.. ಕಣ್ಣೀರಿಟ್ಟು ಹೈಡ್ರಾಮಾ ಮತ್ತು ಗಾಸಿಪ್​​ ಮಾಡುವ ಜನರ ಮಧ್ಯೆ ಸೈಲೆಂಟ್‌ ಆಗಿ ಮನೆಯೊಳಗೆ ಅಗತ್ಯವಿದ್ದಷ್ಟೇ ಮಾತನಾಡುವ ಈ ವ್ಯಕ್ತಿ ಬಿಗ್‌ ಬಾಸ್‌ ಗೆಲ್ಲುತ್ತಾರೆ ಎಂದು ಆರ್ಯವರ್ಧನ್‌ ಗುರೂಜಿ ಹೇಳಿದ್ದಾರೆ.


    ವರ್ತೂರು ಸಂತೋಷ್ ಅವರು ಬಿಗ್ಬಾಸ್ ಗೆಲ್ಲುತ್ತಾರಂತೆ. ವರ್ತೂರು ಸಂತೋಷ್ ಅವರದ್ದು ಮೀನಾ ರಾಶಿಯಾಗಿದ್ದು, ಅವರಿಗೆ ಅನುಕೂಲಕರ ವಾತಾವರಣ ಇದೆ ಎಂದು ಆರ್ಯವರ್ಧನ್ ಗುರೂಜಿ ಹೇಳಿದ್ರು. ವರ್ತೂರ್​​ ಸಂತೋಷ್​​ ಒಳ್ಳೆಯ ವ್ಯಕ್ತಿ, ರೈತನ ಮಗ ಬಿಗ್ ಬಾಸ್ ಮನೆಯಲ್ಲಿ ಬಹುತೇಕರು ಸಿನಿಮಾ ಹಾಗೂ ಟಿವಿ ಸೀರಿಯಲ್ ಗಳಿಂದ ಜನಪ್ರಿಯತೆ ಹೊಂದಿದವರೇ ಇದ್ದಾರೆ.


    ಮನೆಯ ಒಳಗೆ ವರ್ತೂರ್​ ಸಂತೋಷ್​​​ ಅವರನ್ನು ಕುಗ್ಗಿಸುವ ಪ್ರಯತ್ನಗಳು ನಡೆಯುತ್ತಿದ್ದು, ಅವರನ್ನು ಜನ ಬೆಂಬಲಿಸಬೇಕು ಎಂದು ಆರ್ಯವರ್ಧನ್​​​​ ಮನವಿ ಮಾಡಿದ್ದಾರೆ.


    ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನಲ್ಲಿ ಮಾತಾಡಿದ ಆರ್ಯವರ್ಧನ್ ಗುರೂಜಿ ವರ್ತೂರು ಸಂತೋಷ್ ಜನರಿಗೆ ಮನೋರಂಜನೆ ನೀಡುವಂತಹ ವ್ಯಕ್ತಿಯೇ ಆಗಿದ್ದಾರೆ. ಆದರೆ ಅವರ ಮೇಲೆ ಬಂದ ಆರೋಪದಿಂದ ವರ್ತೂರು ಸ್ವಲ್ಪ ವೀಕ್ ಆಗಿದ್ದಾರೆ. ಈ ಹಂತದಲ್ಲಿ ಜನರ ಬೆಂಬಲ ಅವರಿಗೆ ಬೇಕು ಎಂದು ಹೇಳಿದ್ರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts