ಬೆಂಗಳೂರು: ಅಖಿಲ ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರಾಗಿ ಕಲಾವಿದ ಮೃತ್ಯುಂಜಯ ದೊಡ್ಡವಾಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಂದು ನಗರದಲ್ಲಿ ನಡೆದ ಒಕ್ಕೂಟದ ಸರ್ವ ಸದಸ್ಯರ ಸಭೆಯಲ್ಲಿ ಒಕ್ಕೂಟದ ಕಾರ್ಯಕಾರಿ ಸಮಿತಿಗೆ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಉಪಾಧ್ಯಕ್ಷರಾಗಿ, ಕಾ.ವೆಂ.ಶ್ರೀನಿವಾಸಮೂರ್ತಿ, ಕಾರ್ಯದರ್ಶಿಯಾಗಿ ಹರೀಶ್ ನರಸಿಂಹ, ಸಹಕಾರ್ಯದರ್ಶಿಗಳಾಗಿ ಗಣೇಶ ದೇಸಾಯಿ ಹಾಗೂ ಇಂಚರ ಪ್ರವೀಣ್ ಕುಮಾರ್, ಖಜಾಂಚಿಯಾಗಿ ರಾಜೇಂದ್ರ ಬೆಂಡೆ ಆಯ್ಕೆಯಾಗಿದ್ದಾರೆ ಎಂದು ಒಕ್ಕೂಟದ ಆನಂದ ಮಾದಲಗೆರೆ ತಿಳಿಸಿದ್ದಾರೆ.