ಲಖನೌ: ಕಾನ್ಪುರದಲ್ಲಿ ಎಂಟು ಪೊಲೀಸರನ್ನು ಹತ್ಯೆ ಮಾಡಿದ ಗ್ಯಾಂಗ್ಸ್ಟರ್ ವಿಕಾಸ್ ದುಬೆಯನ್ನು ಇಂದು ಮಧ್ಯಪ್ರದೇಶದ ಪೊಲೀಸರು ಉಜ್ಜಯಿನಿಯ ಮಹಾಕಾಳ ದೇವಸ್ಥಾನದಲ್ಲಿ ಬಂಧಿಸಿದ್ದಾರೆ.
ಈಗ ಇದರ ಬಗ್ಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅನುಮಾನ ವ್ಯಕ್ತಪಡಿಸಿದ್ದಾರೆ. ವಿಕಾಸ್ ದುಬೆಯನ್ನು ನಿಜಕ್ಕೂ ಬಂಧಿಸಲಾಗಿದೆಯೋ ಅಥವಾ ಅವನೇ ಬಂದು ಶರಣಾಗಿದ್ದಾನೋ ಎಂದು ಪ್ರಶ್ನಿಸಿದ್ದಾರೆ.
ಕಾನ್ಪುರ ಪೊಲೀಸ್ ಎನ್ಕೌಂಟರ್ ಆರೋಪಿ ವಿಕಾಸ್ ದುಬೆ ಇದೀಗ ಪೊಲೀಸ್ ಕಸ್ಟಡಿಯಲ್ಲಿದ್ದಾನೆಂಬ ಸುದ್ದಿ ನೋಡಿದೆ. ಆದರೆ ದುಬೆಯನ್ನು ಅರೆಸ್ಟ್ ಮಾಡಲಾಗಿದೆಯೋ ಅಥವಾ ಅವನೇ ಬಂದು ಶರಣಾಗಿದ್ದಾನೋ ಎಂಬುದನ್ನು ಉತ್ತರ ಪ್ರದೇಶ ಸರ್ಕಾರ ಸ್ಪಷ್ಟಪಡಿಸಬೇಕು. ಹಾಗೇ ಆತನ ಕಾಲ್ ಡಿಟೇಲ್ ರೆಕಾರ್ಡ್ಗಳನ್ನೂ ಸಾರ್ವಜನಿಕರ ಎದುರು ಪ್ರಸ್ತುತ ಪಡಿಸಬೇಕು. ಹಾಗೇ ವಿಕಾಸ್ ದುಬೆಗೆ ಯಾರ ಬೆಂಬಲವಿದೆ ಎಂಬುದನ್ನೂ ಬಹಿರಂಗ ಮಾಡಬೇಕು ಎಂದು ಅಖಿಲೇಶ್ ಯಾದವ್ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಭಾರತವಷ್ಟೇ ಅಲ್ಲ, ಭಾರತದ ಔಷಧದ ಮೇಲೂ ಅತೀವ ನಂಬಿಕೆ ಬ್ರೆಜಿಲ್ ಅಧ್ಯಕ್ಷರಿಗೆ…!
ವಿಕಾಸ್ ದುಬೆ ಪೊಲೀಸರು ತನ್ನನ್ನು ಕೊಲ್ಲುತ್ತಾರೆ ಎಂಬ ಭಯದಿಂದ ಶರಣಾಗಿದ್ದಾನೆ ಎಂಬ ಸುದ್ದಿಯೂ ವ್ಯಾಪಕವಾಗಿ ಹರಡುತ್ತಿದೆ. ಈ ಬೆನ್ನಲ್ಲೇ ಅಖಿಲೇಶ್ ಯಾದವ್ ಕೂಡ ಆತನ ಬಂಧನದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರು ಕೂಡ ಪೊಲೀಸ್ ಎನ್ಕೌಂಟರ್ ಪ್ರಕರಣವನ್ನು ಉತ್ತರ ಪ್ರದೇಶ ಸರ್ಕಾರ ಸರಿಯಾಗಿ ನಿರ್ವಹಿಸಲಿಲ್ಲ. ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ. (ಏಜೆನ್ಸೀಸ್)
ಕರೊನಾ ಸೋಂಕಿತರ ಪತ್ತೆಗೆ ನಿಯೋಜಿತಗೊಂಡ ಶಿಕ್ಷಕರಿಗಿಲ್ಲ ಸುರಕ್ಷತಾ ಕಿಟ್, ಆನ್ಲೈನ್ ಮಾಹಿತಿಗೆ ನೆಟ್ವರ್ಕ್ ಸಮಸ್ಯೆ