More

    ಗುಜರಾತ್​ ಎದುರು ಕರ್ನಾಟಕ ಬಿಗಿ ಹಿಡಿತ: ಗೆಲುವಿನತ್ತ ಮಯಾಂಕ್​ ಬಳಗದ ಚಿತ್ತ

    ಅಹಮದಾಬಾದ್​: ಬ್ಯಾಟರ್​ ಮನನ್​ ಹಿಂಗ್ರಾಜಿಯಾ (56 ರನ್​, 135 ಎಸೆತ, 5 ಬೌಂಡರಿ) ಅರ್ಧಶತಕದ ನೆರವಿನಿಂದ ಆತಿಥೇಯ ಗುಜರಾತ್​ ತಂಡ ಪ್ರತಿಷ್ಠಿತ ರಣಜಿ ಟ್ರೋಫಿ ದೇಶೀಯ ಟೂರ್ನಿಯಲ್ಲಿ ಪ್ರವಾಸಿ ಕರ್ನಾಟಕ ತಂಡಕ್ಕೆ ಪ್ರತಿರೋಧ ತೋರಿದ್ದು, ವೇಗಿ ವಾಸುಕಿ ಕೌಶಿಕ್​ (11ಕ್ಕೆ 3) ಬಿಗಿ ಬೌಲಿಂಗ್​ ದಾಳಿಯ ನೆರವಿನಿಂದ ಮಯಾಂಕ್​ ಬಳಗ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದೆ.

    ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ “ಸಿ’ ಗುಂಪಿನ ಪಂದ್ಯದ ಮೂರನೇ ದಿನವಾದ ಭಾನುವಾರ 5 ವಿಕೆಟ್​ಗೆ 328 ರನ್​ಗಳಿಂದ ದಿನದ ಆಟ ಮುಂದುವರಿಸಿದ ಕರ್ನಾಟಕ 106.2 ಓವರ್​ಗಳಲ್ಲಿ 374 ರನ್​ಗಳಿಗೆ ಮೊದಲ ಇನಿಂಗ್ಸ್​ ಮುಗಿಸಿತು. 110 ರನ್​ಗಳ ಹಿನ್ನಡೆಯೊಂದಿಗೆ ಎರಡನೇ ಸರದಿ ಆರಂಭಿಸಿದ ಗುಜರಾತ್​ ದಿನದಂತ್ಯಕ್ಕೆ 68 ಓವರ್​ಗಳಲ್ಲಿ 7 ವಿಕೆಟ್​ಗೆ 171 ರನ್​ಗಳಿಸಿದ್ದು, ಸದ್ಯ 61 ರನ್​ಗಳ ಮುನ್ನಡೆ ಸಾಧಿಸಿದೆ. 4ನೇ ಹಾಗೂ ಅಂತಿಮ ದಿನ ಸೋಲು ತಪ್ಪಿಸಲು ಹೋರಾಟ ನಡೆಸಬೇಕಿದೆ.

    ಕರ್ನಾಟಕ: 378 (ಮನೀಷ್​ ಪಾಂಡೆ 88, ಸುಜಯ್​ 31, ರೋಹಿತ್​ 5, ಚಿಂತನ್​ 65ಕ್ಕೆ 3,
    ವಘೇಲಾ 95ಕ್ಕೆ 2). ಗುಜರಾತ್​: 264 ಮತ್ತು 7 ವಿಕೆಟ್​ಗೆ 171 (ಪಾಂಚಾಲ್​ 4, ಸನ್​ಪ್ರೀತ್​ 27, ಮನನ್​ 56, ತಿಜ್​ 26, ಉಮಾಂಗ್​ 29, ಚಿಂತನ್​ ಗಜ 8*, ವಿ.ಕೌಶಿಕ್​ 11ಕ್ಕೆ 3, ರೋಹಿತ್​ 42ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts