ಅಹಮದಾಬಾದ್: ಬ್ಯಾಟರ್ ಮನನ್ ಹಿಂಗ್ರಾಜಿಯಾ (56 ರನ್, 135 ಎಸೆತ, 5 ಬೌಂಡರಿ) ಅರ್ಧಶತಕದ ನೆರವಿನಿಂದ ಆತಿಥೇಯ ಗುಜರಾತ್ ತಂಡ ಪ್ರತಿಷ್ಠಿತ ರಣಜಿ ಟ್ರೋಫಿ ದೇಶೀಯ ಟೂರ್ನಿಯಲ್ಲಿ ಪ್ರವಾಸಿ ಕರ್ನಾಟಕ ತಂಡಕ್ಕೆ ಪ್ರತಿರೋಧ ತೋರಿದ್ದು, ವೇಗಿ ವಾಸುಕಿ ಕೌಶಿಕ್ (11ಕ್ಕೆ 3) ಬಿಗಿ ಬೌಲಿಂಗ್ ದಾಳಿಯ ನೆರವಿನಿಂದ ಮಯಾಂಕ್ ಬಳಗ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದೆ.
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ “ಸಿ’ ಗುಂಪಿನ ಪಂದ್ಯದ ಮೂರನೇ ದಿನವಾದ ಭಾನುವಾರ 5 ವಿಕೆಟ್ಗೆ 328 ರನ್ಗಳಿಂದ ದಿನದ ಆಟ ಮುಂದುವರಿಸಿದ ಕರ್ನಾಟಕ 106.2 ಓವರ್ಗಳಲ್ಲಿ 374 ರನ್ಗಳಿಗೆ ಮೊದಲ ಇನಿಂಗ್ಸ್ ಮುಗಿಸಿತು. 110 ರನ್ಗಳ ಹಿನ್ನಡೆಯೊಂದಿಗೆ ಎರಡನೇ ಸರದಿ ಆರಂಭಿಸಿದ ಗುಜರಾತ್ ದಿನದಂತ್ಯಕ್ಕೆ 68 ಓವರ್ಗಳಲ್ಲಿ 7 ವಿಕೆಟ್ಗೆ 171 ರನ್ಗಳಿಸಿದ್ದು, ಸದ್ಯ 61 ರನ್ಗಳ ಮುನ್ನಡೆ ಸಾಧಿಸಿದೆ. 4ನೇ ಹಾಗೂ ಅಂತಿಮ ದಿನ ಸೋಲು ತಪ್ಪಿಸಲು ಹೋರಾಟ ನಡೆಸಬೇಕಿದೆ.
ಕರ್ನಾಟಕ: 378 (ಮನೀಷ್ ಪಾಂಡೆ 88, ಸುಜಯ್ 31, ರೋಹಿತ್ 5, ಚಿಂತನ್ 65ಕ್ಕೆ 3,
ವಘೇಲಾ 95ಕ್ಕೆ 2). ಗುಜರಾತ್: 264 ಮತ್ತು 7 ವಿಕೆಟ್ಗೆ 171 (ಪಾಂಚಾಲ್ 4, ಸನ್ಪ್ರೀತ್ 27, ಮನನ್ 56, ತಿಜ್ 26, ಉಮಾಂಗ್ 29, ಚಿಂತನ್ ಗಜ 8*, ವಿ.ಕೌಶಿಕ್ 11ಕ್ಕೆ 3, ರೋಹಿತ್ 42ಕ್ಕೆ 2).