ಶ್ರೀನಗರ: ಪಾಕಿಸ್ತಾನ ಸೇನಾ ನೆರವಿನಿಂದ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಮಾಡುವ ಪಾಕ್ ಉಗ್ರರ ಪ್ರಯತ್ನವನ್ನು ಭಾರತೀಯ ಸೇನೆ ದಕ್ಷಿಣ ಕಾಶ್ಮೀರದ ಕೀರನ್ ವಲಯದಲ್ಲಿ ಶನಿವಾರ ವಿಫಲಗೊಳಿಸಿದೆ.
ಜಾಗತಿಕವಾಗಿ ಉಗ್ರರ ಚಟುವಟಿಕೆಯ ಮೇಲೆ ಸದಾ ಕಣ್ಣಿಡುವ ಹಣಕಾಸು ಕ್ರಿಯಾ ಕಾರ್ಯಪಡೆ (ಎಫ್ಎಟಿಎಫ್) ಈ ತಿಂಗಳಲ್ಲಿ ಸಭೆ ಆಯೋಜಿಸಿದ್ದರೂ, ಕ್ಯಾರೆ ಎನ್ನದೇ ಪಾಪಿ ಪಾಕ್ ಉಗ್ರರಿಗೆ ನೆರವಾಗುವುದನ್ನು ದುಷ್ಕೃತ್ಯವನ್ನು ಮುಂದುವರಿಸಿದೆ.
ಕೀರನ್ ವಲಯದಲ್ಲಿ ನಡೆದ ಸೇನಾ ಕಾರ್ಯಾಚರಣೆಯಲ್ಲಿ ನಾಲ್ಕು ಎಕೆ-74 ರೈಫಲ್ಸ್, 8 ಸ್ಫೋಟಕ ವಸ್ತು, 240 ಎಕೆ ರೈಫಲ್ ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದ್ದು, ಸೇನಾ ಕಾರ್ಯಾಚರಣೆ ಮುಂದುವರಿದಿದೆ.
ಇದನ್ನೂ ಓದಿ: ಸಿನಿಮಾದಲ್ಲಿ ಚಾನ್ಸ್ ಕೊಡಿಸ್ತೀನಿ ಎಂದವ 50ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿ ಪರಾರಿ!
ಈ ಬಗ್ಗೆ ಮಾತನಾಡಿರುವ ಚಿನಾರ್ ಕಾರ್ಫ್ಸ್ನ ಜಿಒಸಿ ಲೆಫ್ಟಿನೆಂಟ್ ಜನರಲ್ ಬಿ.ಎಸ್. ರಾಜು, ನಮ್ಮ ಪಡೆಗಳು ಕಣ್ಗಾವಲು ಸಾಧನಗಳ ಮೂಲಕ ಪಾಕ್ನಿಂದ ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯನ್ನು ಪತ್ತೆಹಚ್ಚಿ, ಯತ್ನವನ್ನು ವಿಫಲಗೊಳಿಸಿದೆ. ಇದು ಪಾಕ್ ಕುತಂತ್ರವನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಪಾಕ್ ನೀಚ ಬುದ್ಧಿಯ ವಿರುದ್ಧ ಹೋರಾಡಲು ನಮ್ಮ ಸೇನೆ ಸನ್ನದ್ಧ ಸ್ಥಿತಿಯಲ್ಲಿದೆ ಎಂದು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ 8.30ರ ಸುಮಾರಿಗೆ ಗಡಿ ನಿಯಂತ್ರಣ ರೇಖೆಯ ಬಳಿ ಅಳವಡಿಸಲಾಗಿರುವ ಕಣ್ಗಾವಲು ಯಂತ್ರವು ಕಿಶೆನ್ ಗಂಗಾ ನದಿ (ಕೆಜಿಆರ್) ದಡದಲ್ಲಿ ಕೆಲ ಚಲನಾವಲನವನ್ನು ಪತ್ತೆಚ್ಚಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಸೇನೆಯು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜತೆ ಜಂಟಿ ಕಾರ್ಯಾಚರಣೆ ನಡೆಸಿ ಉಗ್ರರ ಯತ್ನವನ್ನು ವಿಫಲಗೊಳಿಸಿದೆ.
ಮತ್ತೆ ರಾತ್ರಿ 10 ಗಂಟೆ ಸುಮಾರಿಗೆ 2 ರಿಂದ 3 ಉ್ರಗರು ನದಿಯ ದಡದಲ್ಲಿ ರೋಪ್ ಅಳವಡಿಸಿ ಕೆಲ ವಸ್ತುಗಳನ್ನು ಟ್ಯೂಬ್ನಲ್ಲಿಟ್ಟು ಸಾಗಿಸುವುದನ್ನು ಕಣ್ಗಾವಲು ಯಂತ್ರ ಪತ್ತೆಹಚ್ಚಿತು. ತಕ್ಷಣ ಸ್ಥಳಕ್ಕೆ ತೆರಳಿ ಸೇನೆ, ನಾಲ್ಕು ಎಕೆ-74 ರೈಫಲ್ಸ್, 8 ಸ್ಫೋಟಕ ವಸ್ತು, 240 ಎಕೆ ರೈಫಲ್ ಮದ್ದುಗುಂಡುಗಳನ್ನು ವಶಕ್ಕೆ ಪಡೆದಿದೆ. (ಏಜೆನ್ಸೀಸ್)
ಮಳೆ ಜತೆಗೆ ಬಿತ್ತು ಚಿನ್ನದ ನಾಣ್ಯಗಳು: ಗುಂಪಾಗಿ ಜಮಾಯಿಸಿದ ಜನರಿಗೆ ಕಾದಿತ್ತು ಶಾಕ್!