ಅರಸೀಕೆರೆ: ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆ ಪಟ್ಟಣದಲ್ಲಿ ಹಬ್ಬದ ವಾತಾವರಣ ಕಂಡು ಬಂತು.
ಪಾರ್ವತಮ್ಮ ದೇಗುಲ, ಕಾಳನಕೊಪ್ಪಲು, ಮಾರುತಿನಗರ, ಮೊದಲಿಯಾರ್ ಬೀದಿ, ವಾಚನಾಲಯ ರಸ್ತೆಯ ಶ್ರೀ ರಾಮಮಂದಿರ, ಲಕ್ಷ್ಮೀಪುರ ಬಡಾವಣೆಯ ಗಣಪತಿ ದೇಗುಲ ಸೇರಿದಂತೆ ಹಲವೆಡೆ ಹಬ್ಬದ ವಾತಾವರಣ ಕಂಡುಬಂತು. ಮುರುಂಡಿ, ಮಾಡಾಳು, ಬಾಣಾವರ ಕಣಕಟ್ಟೆ, ಹಾರನಹಳ್ಳಿ ಸೇರಿದಂತೆ ಹಲವು ಗ್ರಾಮಗಳು ಸಂಪೂರ್ಣ ಕೇಸರಿಮಯವಾಗಿದ್ದವು.